ಮೊಗರ್ಪಣೆ: ಚಿಸ್ತಿಯಾ ದರ್ಸ್ ವಿದ್ಯಾರ್ಥಿಗಳಿಂದ ಪಂಚ ಭಾಷಾ ಕೃತಿ ಬಿಡುಗಡೆ

0

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಚಿಸ್ತಿಯಾ ದರ್ಸ್ ವಿದ್ಯಾರ್ಥಿಗಳಿಂದ ರಚಿಸಿದ ಪಂಚ ಭಾಷಾ ಕೃತಿ ಸಂಪಾದಕೀಯ ಬಿಡುಗಡೆ ಕಾರ್ಯಕ್ರಮ ಮಸೀದಿಯಲ್ಲಿ ನಡೆಯಿತು.

ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ರವರಿಗೆ ಹಸ್ತಾಂತರಿಸಿ ಬಿಡುಗಡೆ ಗೊಳಿಸಿದರು.

ದರ್ಸ್ ವಿದ್ಯಾರ್ಥಿಗಳಿಗೆ ಆದ್ಯಾತ್ಮಿಕ ಶಿಕ್ಷಣದೊಂದಿಗೆ ಲೌಖಿಖ ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿಯ ಮಾಹಿತಿ ಹಾಗೂ ಅರಿವು ನೀಡುವ ಉದ್ದೇಶದಿಂದ ಪ್ರತಿ ತಿಂಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಘಟನೆಗಳ ಬಗ್ಗೆ ಸಂಪಾದಕೀಯವನ್ನು ರಚಿಸುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ.

ಈ ಒಂದು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಈ ಬಾರಿ ಪಹಲ್ಗಾಂ ದುರಂತದ ಬಗ್ಗೆ ಪಂಚ ಭಾಷೆಯಲ್ಲಿ ಲೇಖನ ಸಂಪಾದಕೀಯವನ್ನು ರಚಿಸಿರುತ್ತಾರೆ ಎಂದು ಮುದರ್ರಿಸ್ ರವರು ಮಾಹಿತಿ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ನಾಯಕರುಗಳು ಹೇಳಿರುವ ಅಭಿಪ್ರಾಯಗಳನ್ನು ಸಂಗ್ರಹಿಸಿ ನಮ್ಮ ವಿದ್ಯಾರ್ಥಿಗಳು ಸಂಪಾದಕಿಯವನ್ನು ರಚಿಸಿದ್ದಾರೆ ಅಲ್ಲದೆ ಪ್ರತಿ ತಿಂಗಳು ಅಂದಿನ ಮುಖ್ಯ ಘಟನೆಗಳಿಗೆ ಸಂಭಂದಿಸಿ ವಿಷಯಗಳನ್ನು ಆಯ್ಕೆ ಮಾಡುವ ಮೂಲಕ ಕೃತಿ ಗಳನ್ನು ರಚಿಸಲಾಗುತ್ತದೆ ಎಂದು ಅವರು ಹೇಳಿದರು.