ಬಸ್ ನಲ್ಲಿ ಬಾಲಕಿಯೊಂದಿಗೆ ಅನುಚಿತ ವರ್ತನೆ

0

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಅಬ್ದುಲ್ ಕುಂಞಿ ಗೆ ಜಾಮೀನು ಮಂಜೂರು

ಪುತ್ತೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಅನುಚಿತವಾಗಿ ವರ್ತಿಸಿದ ಹಾಗೂ ಬಸ್ ನಲ್ಲಿದ್ದವರು ಆರೋಪಿಯನ್ನು ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಮೇ 15 ರಂದು ನಡೆದಿತ್ತು.

ಸೋಮವಾರಪೇಟೆಯ ಕುಟುಂಬವೊಂದು ಪುತ್ತೂರು ಬಸ್ ನಲ್ಲಿ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದಾಗ, ಪುತ್ತೂರಿನಲ್ಲಿ ಬಸ್ ಏರಿದ ಪಾಣಾಜೆಯ ಅಬ್ದುಲ್ ಕುಂಞಿ ಎಂಬವರು ಬಸ್ ನಲ್ಲಿದ್ದ ಸೋಮವಾರಪೇಟೆಯ ಬಾಲಕಿಯ ಮೈ ಮುಟ್ಟಿದನೆನ್ನಲಾಗಿದ್ದು ಇದನ್ನು‌ಬಾಲಕಿ ಆಕ್ಷೇಪಿಸಿ ಬಸ್ ನಲ್ಲಿದ್ದ ತನ್ನ ಮನೆಯವರಿಗೆ ತಿಳಿಸಿದ್ದು ಆ ವ್ಯಕ್ತಿ ಬಾಲಕಿಯೊಂದಿಗೆ ಅನುಚಿತ ವಾಗಿ ವರ್ತಿಸಿದ್ದನ್ನು‌ಬಸ್ ನಲ್ಲಿಧ್ದವರು ನೋಡಿದ್ದರೆಂದು ಬಳಿಕ ಆತನನ್ನು ಹಿಡಿದುಕೊಂಡು ಪೋಲೀಸರಿಗೆ ಮಾಹಿತಿ ನೀಡಿದ್ದರು.

ಬಳಿಕ ಅಬ್ದುಲ್ ಕುಂಞಿಯನ್ನು ವಶಕ್ಕೆ ಪಡೆದಿದ್ದ ಸುಳ್ಯ ಪೋಲೀಸರು ವಿಚಾರಣೆ ನಡೆಸಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 74 ಹಾಗೂ ಮಕ್ಕಳಿಗೆ ಲೈಂಗಿಕ ಅಪರಾಧಗಳಿಂದ ರಕ್ಷಣೆಯ ಕಾಯ್ದೆ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪೊಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು.

ಬಳಿಕ ಆರೋಪಿಗೆ ಜಾಮೀನು ಕೋರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪುತ್ತೂರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇದೀಗ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ. ಆರೋಪಿಯ ಪರವಾಗಿ ವಕೀಲ ಪಿ ಎಂ ಮೊಹಮ್ಮದ್ ರಿಯಾಜ್ ವಾದ ಮಂಡಿಸಿದ್ದಾರೆ.