ಮೇನಾಲದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಾಗೂ ಅಜ್ಜಾವರ ಸ್ತ್ರೀ ಶಕ್ತಿ ಗೊಂಚಲಿನ ಮಹಾಸಭೆ

0

ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ,ಅಜ್ಜಾವರ ಗ್ರಾಮ ಪಂಚಾಯತ್, ಶ್ರೀನಿಧಿ ಸ್ತ್ರೀಶಕ್ತಿ ಗೊಂಚಲು ಅಜ್ಜಾವರ ಇದರ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಾಗೂ ಗೊಂಚಲಿನ ವಾರ್ಷಿಕ ಮಹಾಸಭೆಯು ಜೂ.10 ರಂದು ಮೇನಾಲ ಡಾ. ಬಿ .ಆರ್ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.

ಶ್ರೀನಿಧಿ ಗೊಂಚಲಿನ ಅಧ್ಯಕ್ಷೆ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಶ್ರೀಮತಿ ಜೆ.ಡಿ ವಿಜಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಚಂದ್ರಕಲಾ ರವರು ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಅಜ್ಜಾವರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸವಿತಾ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಬಾಲಕೃಷ್ಣ ಮೇನಾಲ, ಶ್ರೀನಿಧಿ ಸ್ತ್ರೀಶಕ್ತಿ ಗೋಚಲಿನ ಉಪಾಧ್ಯಕ್ಷೆ ಶ್ರೀಮತಿ ತಿಲಕ ಹರೀಶ್ ಕುತ್ಯಾಡಿ, ಕಾರ್ಯದರ್ಶಿ ಶ್ರೀಮತಿ ವಾರಿಜಾ ತೋರಣಗಂಡಿ, ಶ್ರೀಮತಿ ಪ್ರತಿಭಾ ಭಾಸ್ಕರ ದೊಡ್ಡೇರಿ, ಶ್ರೀಮತಿ ಲತಾ ಪ್ರಸಾದ್ ಬೇಲ್ಯ, ಶ್ರೀಮತಿ ಸುಜಾತ ವಸಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂಗಾರು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಜಾಥಾಕ್ಕೆ ಚಾಲನೆ ನೀಡಲಾಯಿತು. ಕಿರಿಯ ವಿಜ್ಞಾನಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರವೀಂದ್ರ ಗೌಡ ಪಾಟೀಲ, ಸಹಾಯಕ ಪ್ರಾಧ್ಯಾಪಕರು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಡಾ. ದಿನಕರ ಅಡಿಗ, ನಿರ್ದೇಶಕರು ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು, ಡಾ. ಜ್ಯೋತಿ ವಿಜ್ಞಾನಿಗಳು ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು, ಸಹಾಯಕ ತೋಟಗಾರಿಕಾ ನಿರ್ದೇಶಕಿ ಶ್ರೀಮತಿ ಸುಹಾನ ರವರು ಕೃಷಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶ್ರೀನಿಧಿ ಸ್ತ್ರೀಶಕ್ತಿ ಗೊಂಚಲು ಅಜ್ಜಾವರದ ನೂತನ ಅಧ್ಯಕ್ಷರಾಗಿ ಶ್ರೀಮತಿ ಗೀತಾ ಪ್ರಸಾದ್ ಅಡ್ಪಂಗಾಯ ಹಾಗೂ ಕಾರ್ಯದರ್ಶಿ ಶ್ರೀಮತಿ ಪದ್ಮಿನಿ ಲೋಕೇಶ್ ದೊಡ್ಡೇರಿ, ಕೋಶಾಧಿಕಾರಿ ಶ್ರೀಮತಿ ದಿವ್ಯ ಉದ್ದಂತ್ತಡ್ಕ , ಉಪಾಧ್ಯಕ್ಷೆ ಶ್ರೀಮತಿ ಯಶೋಧ ಮೇನಾಲ, ಜತೆ ಕಾರ್ಯದರ್ಶಿ ವೇದಾವತಿ ಮುಳ್ಯ ರವರನ್ನು ಆಯ್ಕೆ ಮಾಡಲಾಯಿತು.

ಸುಳ್ಯ ಬ್ಲಾಕ್ ಸೊಸೈಟಿ ಸದಸ್ಯೆಯಾಗಿ ಶ್ರೀಮತಿ ವಿಶಾಲ ಸೀತಾರಾಮ ಆಯ್ಕೆಯಾದರು. ದೊಡ್ಡೇರಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಪ್ರಾರ್ಥಿಸಿದರು. ಶೋಭಾ ಮೇನಾಲ ಸ್ವಾಗತಿಸಿ, ಗೀತಾ ಪ್ರಸಾದ್ ವಂದಿಸಿದರು.
ಸಾವಿತ್ರಿ ಜಯನ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಖಿ ಪೂರ್ಣಿಮಾ ಸಹಕರಿಸಿದರು. ಸ್ತ್ರೀ ಶಕ್ತಿ ಗೊಂಚಲಿನ ಸದಸ್ಯರು ಭಾಗವಹಿಸಿದರು.