ಬೆಳ್ಳಾರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ

0

ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದವರು : ಸತೀಶ್ ಕುಂಪಲ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ,ಯುವವಾಹಿನಿ ಸುಳ್ಯ ಘಟಕ ವತಿಯಿಂದ 171 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಪುರೋಹಿತರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು.


ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಪದ ಚಿಂತಕರಾದ ಶೈಲು ಬಿರ್ವ ದೋಲ ಬಾರಿಕೆ ಇವರು ಗುರುಸಂದೇಶ ನೀಡಿದರು.
ಭಾ.ಜ.ಪಾ.ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ,ಬಿಲ್ಲವ ಸಂಘದ ಗೌರವಾಧ್ಯಕ್ಷ ಎನ್.ಎಸ್.ಡಿ.ವಿಠಲದಾಸ್, ಸ್ಥಾಪಕಾಧ್ಯಕ್ಷ ಜನಾರ್ಧನ ಪೂಜಾರಿ ಅಲೆಕ್ಕಾಡಿ,
ಯುವ ವಾಹಿನಿ ಸುಳ್ಯ ಇದರ ಅಧ್ಯಕ್ಷ ಹರೀಶ ಉಪ್ಪಂಗಳ,ಕಾರ್ಯದರ್ಶಿ ನವೀನ ಪೂಜಾರಿ ರಾಮಕುಮೇರಿ, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತ ಅನಿಲ ಉಪಸ್ಥಿತರಿದ್ದರು.


ಸನ್ಮಾನ


ನಿವೃತ್ತ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ,ನಿವೃತ್ತ ಕ್ಯಾಂಪ್ಕೋ ಅಧಿಕಾರಿ ರಾಘವ ಪೂಜಾರಿ ಸಾರಕರೆ,ಆಯುರ್ವೇದ ವೈದ್ಯಕೀಯ ಕ್ಷೇತ್ರದ ಡಾ.ರೂಪಾ ವಿಠಲದಾಸ್ ಬೆಳ್ಳಾರೆಯವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಗೌರವಾರ್ಪಣೆ


ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ,ವಾಸ್ತು ರಚನಾ ಕನ್ ಸ್ಟ್ರಕ್ಷನ್ ನ ವಿಶ್ವನಾಥ ಪೂಜಾರಿ ಕೊಳಂಬಳ, ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ರಶ್ಮಿತಾ ಕರ್ಕೇರಾ ಎನ್, ಕಾಣಿಯೂರು ಬ್ಯಾಂಕ್ ಆಫ್ ಬರೋಡಾದ ಶ್ರೀಮತಿ ಅಕ್ಷತಾ ಎಂ.
ಮತ್ತು 2024-25 ನೇ ಸಾಲಿನ 10 ನೇ ತರಗತಿಯಲ್ಲಿ ರಾಜ್ಯದಲ್ಲಿ 6 ನೇ ರ್ಯಾಂಕ್ ಪಡೆದ ಕು.ಅಪೇಕ್ಷಾ ಅಲೆಕ್ಕಾಡಿಯವರನ್ನು ಗೌರವಿಸಲಾಯಿತು.
2024 -25 ನೇ ಸಾಲಿನ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಕೆ.ವಿ.ಗಣೇಶ್ ಪೆರುವಾಜೆ ಮತ್ತು ಶ್ರಾವ್ಯ ಜಿ.ಪಿ.ಕಾರ್ಯಕ್ರಮ ನಿರೂಪಿಸಿ,
ಹರೀಶ ಕಾವಿನಮೂಲೆ ವಂದಿಸಿದರು.