ಜೇಸಿಐ ಪಂಜ ಪಂಚಶ್ರೀ: ಜೇಸಿ ಸಪ್ತಾಹ- 2025

0

ಕೃಷಿ ಕ್ಷೇತ್ರ ಭೇಟಿ ವೀಕ್ಷಣೆ ಮತ್ತು ಮಾಹಿತಿ ಕಾರ್ಯಗಾರ

ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ “ಎಫ್” ವಲಯ 15 ಜೇಸಿ ಸಪ್ತಾಹ 2025 ರ ಅಂಗವಾಗಿ 3ನೇ ದಿನದ ಕಾರ್ಯಕ್ರಮವು ಅ. 28 ರಂದು ಪುತ್ತೂರು ಚಿಕ್ಕಮುಡ್ನೂರು ಕಾಯರ್ತಡಿ ಅಜಿತ್ ಪ್ರಸಾದ್ ರೈ ರವರ ತೋಟದಲ್ಲಿ ಕೃಷಿ ಕ್ಷೇತ್ರ ಭೇಟಿ ವೀಕ್ಷಣೆ ಮತ್ತು ಮಾಹಿತಿ ಕಾರ್ಯಗಾರ ನಡೆಯಿತು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಯಾಗಿ ಜೇಸಿಐ ಭಾರತ, ವಲಯ 15 ಪ್ರಾಂತ್ಯ ಇ, ವಲಯ ಉಪಾಧ್ಯಕ್ಷ JCI SEN ಸುಹಾಸ್ ಮರಿಕೆ ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಚಿಕ್ಕಮುಡ್ನೂರು ಕಾಯರ್ತಡಿ ಪ್ರಗತಿ ಪರ ಕೃಷಿಕ ಅಜಿತ್ ಪ್ರಸಾದ್ ರೈ, ಅತಿಥಿಗಳಾಗಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿ ಅಧ್ಯಕ್ಷ JC ತೀರ್ಥಾನಂದ ಕೊಡಿಂಕಿರಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ರವರನ್ನು ಜೇಸಿ ಸಪ್ತಾಹದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ JFM ಜೀವನ್ ಮಲ್ಕಜೆ, ಕಾರ್ಯದರ್ಶಿ, JFM ಅಶ್ವತ್ ಬಾಬ್ಲುಬೆಟ್ಟು, ಸಪ್ತಾಹ ನಿರ್ದೇಶಕರಾದ JFM ದೇವಿಪ್ರಸಾದ್ ಚಿಕ್ಮುಳಿ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಪೂರ್ವಾಧ್ಯಕ್ಷರಾದ JC ಸೋಮಶೇಖರ್ ನೇರಳ ವಾಚಿಸಿದರು. ಕಾರ್ಯದರ್ಶಿ JFM ಅಶ್ವತ್ ಬಾಬ್ಲುಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಮತ್ತು ರೈತ ಉತ್ಪಾದಕ ಸಂಘದ ಸದಸ್ಯರು ಸುಮಾರು 60 ಮಂದಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.

ಅ.29 ರಂದು ಪಂಜ ಲಯನ್ಸ್ ಭವನದಲ್ಲಿ ‘ಜೀವನವನ್ನು ಸಂಭ್ರಮಿಸಿ’ ಕೌಟುಂಬಿಕ ತರಬೇತಿ ಕಾರ್ಯಗಾರ. ಅ.30 ರಂದು ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ
ಆರೋಗ್ಯ ಮಾಹಿತಿ ‘ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಹಾಗೂ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು. ನ. 1ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ ನಡೆಯಲಿದೆ. ಚಿತ್ರಕಲಾ ಸ್ಪರ್ಧೆ ( ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ). LKG ಯಿಂದ 1ನೇ ತರಗತಿ ಐಚ್ಛಿಕ, 2ರಿಂದ 4ನೇ ತರಗತಿ ಐಚ್ಛಿಕ, 5ರಿಂದ 7ನೇ ತರಗತಿ ಪ್ರಕೃತಿ ವಿಕೋಪ, 8ರಿಂದ 10ನೇ ತರಗತಿ ತಾಯಿ ವಾತ್ಸಲ್ಯ, ಪಿಯುಸಿ ತುಳುನಾಡ ಸಂಸ್ಕೃತಿ ವಿಷಯದಲ್ಲಿ ನಡೆಯಲಿದೆ. ಸಂಜೆ ಗಂಟೆ 6 ರಿಂದ ಸಮಾರೋಪ ಸಮಾರಂಭದಲ್ಲಿ ಘಟಕದ ಪೂರ್ವಾಧ್ಯಕ್ಷ JFM ನಾಗಮಣಿ ಕೆದಿಲ ರವರಿಗೆ ಕಮಲಪತ್ರ ಪುರಸ್ಕಾರ ನಡೆಯಲಿದೆ.

ಪಾಂಡಿಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಯಶೋಧರ ಕಳಂಜ ರವರಿಗೆ ಸನ್ಮಾನ ನಡೆಯಲಿದೆ. ಪರಿಸರದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಸುಮಾ ಕೋಟೆ ಇವರಿಂದ ಗಾನ ಸುಧೆ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.