
ದ.ಕ.ತಮಿಳು ಸೇವಾ ಸಂಘ ಸುಳ್ಯ ಇದರ 2026 – 2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ಕಚೇರಿಯಲ್ಲಿ ಡಿ.14 ರಂದು ನಡೆಯಿತು. ಅಧ್ಯಕ್ಷರಾಗಿ ದೇವದಾಸ್ ಪೊನ್ವೇಲಿ, ಪ್ರಧಾನ ಕಾರ್ಯದರ್ಶಿ ಯಾಗಿ ಸೆಲ್ವರಾಜ್ ಎಸ್.ಐವರ್ನಾಡು, ಕೋಶಾಧಿಕಾರಿಯಾಗಿ ಸುರೇಶ್ ಕುಮಾರ್ ಕೆ.ಕಂದಡ್ಕ,ಇವರನ್ನು ಸರ್ವಾನು ಮತದಿಂದ ಆಯ್ಕೆಯಾದರು.ಈ ಸಭೆಯಲ್ಲಿ ಸಂಘದ ಸ್ಥಾಪಕರಾದ ರಾಮಸ್ವಾಮಿ (ಆನಂದ), ಸುಂದರರಾಜ್ ಬೇಂಗಮಲೆ ಉಪಸ್ಥಿತರಿದ್ದರು.









ಈ ಸಂದರ್ಭದಲ್ಲಿ ರೀಕೊ ಸೊಸೈಟಿ ಸುಳ್ಯ ಇದರ ಅಧ್ಯಕ್ಷ ರಾದ ಶಿವಕುಮಾರ್ ಎಸ್.ಮಂಗಳೂರು, ಜ್ಞಾನಶೀಲನ್ ಕಲ್ಲುಗುಂಡಿ,ದಯಾಲನ್ ಬಾರ್ಪಾಣೆ, ಶಿವಕುಮಾರ್ ಕಂದಡ್ಕ,ಜೀವರತ್ನಂ ನಾಗಪಟ್ಟಣ, ಕೋಮಗನ್ ಕ್ರೂಸ್ ನಾಗಪಟ್ಟಣ,ಸೆಲ್ವರಾಜ್ ಕೂಟೇಲು, ಸಿಲ್ ವಿನ್ ರಾಜ್ ಜಯನಗರ, ಅರುಣಾಚಲಂ ಕೂಟೇಲು,ಗಣೇಶ್ ನಾಗಪಟ್ಟಣ, ಚಂದ್ರನ್ ಕೂಟೇಲು, ನಾಗಮುತ್ತು ಕಲ್ಲುಗುಂಡಿ,ವಿನೋದ್ ಬಾರ್ಪಣೆ, ರಕ್ಷಿತ್ ದೊಡ್ಡಡ್ಕ, ಸತ್ಯರಾಜ್ ಕಂದಡ್ಕ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು.



