








ಐವರ್ನಾಡು ಗ್ರಾಮದ ಸಾರಕರೆ ದಿ.ತಿಮ್ಮಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ ಸಾರಕರೆಯವರು ಡಿ.01 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಡಿ.17 ರಂದು ಸಾರಕರೆ ಮನೆಯಲ್ಲಿ ನಡೆಯಿತು.
ಧರ್ಮಪಾಲ ಶೇಣಿಯವರು ದಿ.ದೇವಕಿ ಸಾರಕರೆಯವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.

ಆಗಮಿಸಿದ ನೂರಾರು ಜನ ಗಣ್ಯರು ದೇವಕಿ ಸಾರಕರೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ
ಪುತ್ರ ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಉದ್ಯೋಗಿ ರಾಘವ ಸಾರಕರೆ,ಪುತ್ರಿಯರಾದ ಶ್ರೀಮತಿ ಪುಷ್ಪಾವತಿ ಕೂಸಪ್ಪ ಕಾಡ್ಲ,ಶ್ರೀಮತಿ ಲೀಲಾವತಿ ಆನಂದ ಪೂಜಾರಿ ಮಡಿಕೇರಿ,ಅಳಿಯ ಅಚ್ಚುತ ಪೂಜಾರಿ ಹಾಗೂ ಮಕ್ಕಳು,ಸೊಸೆ ಶ್ರೀಮತಿ ಶಶಿಕಲಾ, ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.










