ಡಿ. ಕೆ. ಎಸ್. ಸಿ. ಮಂಗಳೂರು ಜಿಲ್ಲಾ ಸುಳ್ಯ ಘಟಕದ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

0

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಎಸ್‌ಸಿ) ಮಂಗಳೂರು ಜಿಲ್ಲಾ ಸಮಿತಿ ಇದರ ಸುಳ್ಯ ಘಟಕದ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ಜೂ 17 ರಂದು ಗಾಂಧಿನಗರ ಸುನ್ನಿ ಸೆಂಟರ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಪಟೇಲ್ ವಹಿಸಿದ್ದರು. ಮುಖಂಡರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಮೊಗರ್ಪಣೆ ಕಳೆದ ಸಾಲಿನ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.

ಬಳಿಕ ಸುದೀರ್ಘ ಚರ್ಚೆಗಳು ನಡೆದು ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ರೂಪಿಸಲ್ಪಡುವ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆಗಳು ನಡೆದು ಅಂಗೀಕಾರಗಳು ನಡೆಯಿತು.

ನಂತರ ಡಿ. ಕೆ. ಎಸ್. ಸಿ. ಇದರ ಸ್ಥಾಪಕ ಸದಸ್ಯರು ಜಿಲ್ಲಾ ಸಮಿತಿಯ ಕೋಶಧಿಕಾರಿ ಝೈನುದ್ದೀನ್ ಮುಕ್ವೆ ಯವರ ನೇತೃತ್ವದಲ್ಲಿ 2023-24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪಟೇಲ್ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕಮಲ್ ಅಜ್ಜಾವರ, ಕೋಶಧಿಕಾರಿಯಾಗಿ ಐ ಇಸ್ಮಾಯಿಲ್ ಹಾಜಿ,
ಉಪಾಧ್ಯಕ್ಷರುಗಳಾಗಿ ಅಬ್ದುಲ್ ಲತೀಫ್ ಅರ್ಲಡ್ಕ,ಅಬ್ದುಲ್ ಹಮೀದ್ ಬೇಜಕೊಚ್ಚಿ ,
ಎಸ್. ಪಿ. ಅಬೂಬಕ್ಕರ್,
ಕಾರ್ಯದರ್ಶಿಯಾಗಿ ಬದ್ರುದ್ದೀನ್ ಪಟೇಲ್, ಸಂಘಟನಾ ಕಾರ್ಯದರ್ಶಿಗಳಾಗಿ ಮೊಯಿದಿನ್ ಫ್ಯಾನ್ಸಿ,ಸಿದ್ದೀಕ್ ಕಟ್ಟೆಕ್ಕಾರ್ಸ್,ಸಲಹೆಗರರಾಗಿ ಎ. ಬಿ. ಹಸನುಲ್ ಫೈಝಿ,ಹಾಜಿ ಅಬ್ದುಲ್ ಮಜೀದ್ ಜೆ ಎಸ್ ಹಾಜಿ ಮುಸ್ತಫಾ ಕೆ ಎಂ, ಅಬ್ದುಲ್ ಹಮೀದ್ ಎಸ್.ಎಂ, ಹಾಜಿ ಕೆ. ಎಂ.ಉಮ್ಮರ್ ಮೆಟ್ರೋ,ಅಬ್ದುಲ್ ರಝಾಕ್ ಹಾಜಿ ಶೀತಲ್ ಆಯ್ಕೆಯಾದರು. ಸದಸ್ಯರುಗಳಾಗಿ ಮೊಹಿಧ್ಧೀನ್ ಕೆ.ಎಂ.ಜಟ್ಟಿಪಳ್ಳ,ತಾಜುದ್ದೀನ್ ಅರಂತೋಡು,ಸಿದ್ದೀಕ್ ಮೊಗರ್ಪಣೆ,ಅಶ್ರಫ್ ಮೆಟ್ರೋ,ಹಸೈನಾರ್ ಜಯನಗರ,ಇಬ್ರಾಹಿಂ ಜಾಲ್ಸೂರು, ಇನ್ನಿತರ ಮುಖಂಡರು ಆಯ್ಕೆಯಾದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷ ಹುಸೈನ್ ಹಾಜಿ ಕಿನ್ಯ,ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ,ಆರ್ಗನೈಝರ್ ಮನ್ಸೂರ್ ವೆಲ್ಕಮ್,ಅಬ್ದುಲ್ ಹಮೀದ್ ಬೀಜಕೊಚ್ಚಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.
ಸಿದ್ದೀಕ್ ಮಾಂಬ್ಳಿ ಸ್ವಾಗತಿಸಿ ವಂದಿಸಿದರು.