ಜ್ಞಾನದೀಪ ಶಾಲೆ ಎಲಿಮಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ರಚನೆ

0

ಜ್ಞಾನದೀಪ ಶಾಲೆ ಎಲಿಮಲೆಯಲ್ಲಿ 2O23-24 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆ ಜೂ. 24 ರಂದು ನಡೆಯಿತು. ಮುಖ್ಯಮಂತ್ರಿಯಾಗಿ ನೂತನ್ ಬಿ.ಐ, ಉಪಮುಖ್ಯಮಂತ್ರಿಯಾಗಿ ಸಂಗಮ್ ಕೆ.ಯು ಹಾಗೂ ಸ್ಪೀಕರ್ ಆಗಿ ಶ್ರೇಯಾ ಎಂ.ಜಿ ಅವರು ಆಯ್ಕೆಗೊಂಡರು. ಮಂತ್ರಿಮಂಡಲದ ನಾಯಕರುಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಅವರು ಮಂತ್ರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಪ್ರಮಾಣವಚನವನ್ನು ಬೋಧಿಸಿದರು. ಶಾಲಾ ಮಂತ್ರಿ ಮಂಡಲದ ನಾಯಕರುಗಳು ಎಲ್ಲಾ ಶಿಕ್ಷಕ ವೃಂದದ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಶಾಲಾ ಸಹ ಶಿಕ್ಷಕಿ ಪೂಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.