ತಾರಸಿ ಕೃಷಿಕ ಪಡ್ಡoಬೈಲ್ ಕೃಷ್ಣಪ್ಪ ಗೌಡರಿಂದ ಸುಳ್ಯದ ಪತ್ರಕರ್ತರಿಗೆ ಗೌರವ

0

ಮಂಗಳೂರಿನಲ್ಲಿ ನೆಲೆಸಿರುವ ಪ್ರಸಿದ್ಧ ತಾರಸಿ ಕೃಷಿಕ ಸುಳ್ಯದ ಪಡ್ಡoಬೈಲಿನ ಕೃಷ್ಣಪ್ಪ ಗೌಡರು ಸುಳ್ಯದ ಹಿರಿಯ ಪತ್ರಕರ್ತ, ಕಾರ್ಯನಿರತ ಪತ್ರಕರ್ತ ಸಂಘದ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಕೋರತ್ತೋಡಿ ಯವರನ್ನು ಜೂನ್ 23ರಂದು ಸಂಜೆ ಅವರ ಮಂಗಳೂರಿನ ತಾರಸಿ ತೋಟದಲ್ಲಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೃಷ್ಣಪ್ಪ ಗೌಡರವರ ಪತ್ನಿ ಮೀನಾಕ್ಷಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಪತ್ರಕರ್ತ ರಾದ ಜೆ.ಕೆ.ರೈ, ಗಿರೀಶ್ ಅಡ್ಪಂಗಾಯ ಉಪಸ್ಥಿತರಿದ್ದರು.