ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ

0

ಸರ್, ನಿಮಗೆ ತೃಪ್ತಿ ಕೊಟ್ಟಿದ್ದು ಜೆಡಿಎಸ್ಸೊ? ಕಾಂಗ್ರೆಸ್ಸೊ?

ಬೆಂಗಳೂರಿನಲ್ಲಿ ನಿನ್ನೆ ನೂತನ ಶಾಸಕರ ತರಬೇತಿ ಕಾರ್ಯಗಾರದ ಉದ್ಘಾಟನೆ ಬಳಿಕ ಆಯೋಜನೆಗೊಂಡಿದ್ದ ಸಂವಾದದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಿ.ಎಂ‌.ಸಿದ್ಧರಾಮಯ್ಯರಲ್ಲಿ ಕೇಳಿದ ಪ್ರಶ್ನೆ ಗಮನ ಸೆಳೆಯಿತು.

ತನ್ನನ್ನು ಪರಿಚಯ ಮಾಡಿಕೊಂಡ ಅವರು, ಸರ್ ನೀವು ಹಿರಿಯ ನಾಯಕರು. ತಮಗೆ ಜೆಡಿಎಸ್‌ನಿಂದ ತೃಪ್ತಿ ಸಿಕ್ಕಿದೆಯೋ ಅಥವಾ ಕಾಂಗ್ರೆಸ್ ನಿಂದಲೋ? “ಎಂದಾಗ ಸಿದ್ದರಾಮಯ್ಯ, ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪಕ್ಷದಲ್ಲಿ ತೃಪ್ತಿ ಸಿಕ್ಕಿದೆ ಎಂದರು.