ಬೆಳಗ್ಗೆ 7 ರಿಂದ ಮಧ್ಯಾಹ್ನ ‌1 ರವರೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ

0

ದ.ಕ. ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ 7.00ಗಂಟೆಯಿಂದ ಮಧ್ಯಾಹ್ನ 1.00ಗಂಟೆಯವರೆಗೆ ಪಡಿತರ ವಿತರಣೆ ಗೆ ಸಮಯ ನಿಗದಿ ಪಡಿಸಿರುವುದಾಗಿ ತಿಳಿದುಬಂದಿದೆ.

ಜೂನ್ ತಿಂಗಳ ಪಡಿತರ ಜೂ.27ರ ಒಳಗೆ ವಿತರಣೆ ಆಗಬೇಕೆಂದು ಇಲಾಖೆ ಸೂಚನೆ ನೀಡಿತ್ತು. ಆದರೆ ಸರ್ವರ್ ಸಮಸ್ಯೆ ಎದುರಾದುದರಿಂದ ಈ ತಿಂಗಳ ಕೊನೆಯವರೆಗೆ ಪಡಿತರ ವಿತರಣೆಗೆ ಸೂಚನೆ ನೀಡಲಾಯಿತು. ಇದೀಗ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪಡಿತರ ವಿತರಣೆ ಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಹೆಚ್ಚಿನ ಕಡೆ ಪಡಿತರ ವಿತರಣೆಯಾಗಿದೆ.‌ಸರ್ವರ್ ಸಮಸ್ಯೆಯಿಂದ ಕೆಲವು ಬಾಕಿ ಇದೆ. ಮಧ್ಯಾಹ್ನನಂತರ ಸರ್ವರ್ ಸಮಸ್ಯೆ ಹೆಚ್ಚಿರುವುದರಿಂದ ಬೆಳಗ್ಗೆ ಪಡಿತರ ವಿತರಣೆ ಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.