ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಗರ್ಭನ್ಯಾಸ ಕಾರ್ಯಕ್ರಮ

0

ಎಣ್ಮೂರು -ಐವತ್ತೊಕ್ಲು ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ದೇವಳದ ಷಡಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ಜೂ.27 ಮತ್ತು ಜೂ.28 ರಂದು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಜೂ.28 ರಂದು ಸಂಜೆ ಸ್ವಸ್ತಿ ಪುಣ್ಯ ಹವಾಚನ, ಸ್ಥಳ ಶುದ್ದಿ , ಗರ್ಭನ್ಯಾಸ ಹೋಮ, ಇಷ್ಟಕಾನ್ಯಾಸ,ಗರ್ಭನ್ಯಾಸ ಜರುಗಿತು.ಶಿಲ್ಪಿ ಈಶ್ವರಚಂದ್ರ,
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಕಾರ್ಯದರ್ಶಿ ಗುರುಪ್ರಸಾದ ತೋಟ,ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಕರಿಮಜಲು,ಆಡಳಿತ ಮಂಡಳಿ ಸರ್ವ ಸದಸ್ಯರು,ಪುನರ್ ನಿರ್ಮಾಣ ಸಮಿತಿ ಸರ್ವ ಸದಸ್ಯರು,ವಿವಿಧ ಸಮಿತಿಗಳ ಪದಾಧಿಕಾರಿಗಳು
,ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಜೂ.28 ರಂದು ಮುಂಜಾನೆ ಮಹಾಗಣಪತಿ ಹೋಮ, ಸಿಂಹ‌ ಲಗ್ನದ ಶುಭ ಮುಹೂರ್ತದಲ್ಲಿ ಆಧಾರ‌ಶಿಲಾ ಪ್ರತಿಷ್ಠೆ,ನಿಧಿ ಕುಂಭ ಪ್ರತಿಷ್ಠೆ, ಷಡಾಧಾರ ಪ್ರತಿಷ್ಠೆ , ಪ್ರಸಾದ ವಿತರಣೆ ನಡೆಯಿತು.

ಜೂ.27ರಂದು ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯ ಹವಾಚನ ,ಸ್ಥಳ ಶುದ್ದಿ, ವಾಸ್ತು ಪೂಜೆ, ಷಡಾಧಾರಗಳ ಅಧಿವಾಸ , ಪ್ರಸಾದ ವಿತರಣೆ ಜರುಗಿತು.