ಸೋಲಾರ್ ಎನರ್ಜಿ ಕುರಿತು ವಿವಿಧ ಆವಿಷ್ಕಾರಗಳು : ಮಾಹಿತಿ ಮತ್ತು ಸಂವಾದ

0

ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಆಯೋಜನೆ

ಸೋಲಾರ್ ಎನರ್ಜಿ ವಿವಿಧ ಆವಿಷ್ಕಾರಗಳ ಕುರಿತು‌ ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಜು.2 ರಂದು‌ಸುಳ್ಯದ ರಂಗಮಯೂರಿ ಕಲಾ ಕೇಂದ್ರದಲ್ಲಿ ನಡೆಯಿತು.

ಸುದ್ದಿ ಕೃಷಿ ಸೇವಾ ಕೇಂದ್ರದ ಆಶ್ರಯದಲ್ಲಿ ‌ನಡೆದ ಈ ಮಾಹಿತಿ ಕಾರ್ಯಾಗಾರದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರು ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಸೋಲಾರ್ ಎನರ್ಜಿ ಸರ್ವಿಸಸ್ ನ ಉಮೇಶ್ ರೈ ಕೈಕಾರ ರವರು ವಿವಿಧ ಸೋಲಾರ್ ಲೈಟ್, ಸೋಲಾರ್ ಹೀಟರ್, ಸೋಲಾರ್ ಪಂಪ್ ಸೆಟ್, ಸೋಲಾರ್ ಅಪ್ ಗ್ರೇಡ್‌, ಸೋಲಾರ್ ಆನ್ ಗ್ರೀಡ್, ಹೈಬ್ರೀಡ್ ಇನ್ವರ್ಟರ್ ಗಳ ಖರ್ಚು ವೆಚ್ಚಗಳ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.