ಜೇಸಿಐ ಪಂಜ ಪಂಚಶ್ರೀ ವತಿಯಿಂದ -ಪಾಂಡಿಗದ್ದೆ ಶಾಲೆಯಲ್ಲಿ ವನಮಹೋತ್ಸವ

0

ಜೇಸಿ ಐ ಪಂಜ ಪಂಚಶ್ರೀ ಇದರ ವತಿಯಿಂದ ಪಾಂಡಿಗದ್ದೆ ಸ.ಕಿ.ಪ್ರಾ.ಶಾಲೆಯಲ್ಲಿ ವನಮಹೋತ್ಸವ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಜು.12 ರಂದು ನಡೆಯಿತು
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಣ್ಣಿನ ಗಿಡ ದಾನಿಗಳಾದ ವನಸಿರಿ ಫಾರ್ಮ್ಸ್ ಮತ್ತು ಸಾನಿಕಾ ನರ್ಸರಿ ಚೀಮುಳ್ಳು ಇದರ ಮಾಲಕ ಹಾಗೂ ಜೇಸಿ ವಲಯ ಪೂರ್ವ ಉಪಾಧ್ಯಕ್ಷ ದಯಪ್ರಸಾದ್ ಚೀಮುಳ್ಳು, ಮುಖ್ಯೋಪಾಧ್ಯ ಯಶೋಧರ ಕಳಂಜ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರ್ದೇಶಕ,ಶಿಕ್ಷಕ ಅಶೋಕ ಕುಮಾರ್ ದಿಡುಪೆ ಸ್ವಾಗತಿಸಿದರು.

ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು. ಸದಸ್ಯರಾದ ಗಗನ್ ಕಿನ್ನಿಕುಮೇರಿ ಜೀವನ್ ಶೆಟ್ಟಿಗದ್ದೆ ಕಿರಣ್ ಕಂರ್ಬುನೆಕ್ಕಿಲ ಹಾಗೂ ಸಹಶಿಕ್ಷಕಿ,ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು .