ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು ಭಾಗಗಳಿಗೆ ಎ‌. ಸಿ ಗಿರೀಶ್ ನಂದನ್ ಭೇಟಿ

0

ಮಳೆ ನೀರಿನಿಂದ ಪ್ರವಾಹಕ್ಕೆ ಒಳಗಾದ ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಬೆಂಡೋಡಿ ಭಾಗಗಳಿಗೆ ಇಂದು ಪುತ್ತೂರಿನ ಸಹಾಯ ಆಯುಕ್ತ ಗಿರೀಶ್ ನಂದನ್ ಭೇಟಿ ನೀಡಿದ್ದಾರೆ.

ಈ ಸಂದರ್ಭ ಸುಳ್ಯ ತಹಶಿಲ್ದಾರ್ ಮಂಜುನಾಥ್, ಪಂಜ ಆರ್ ಐ, ಹರಿಹರ ಪಲ್ಲತಡ್ಕ ಗ್ರಾ.ಪಂ ಸಿಬ್ಬಂದಿ ಪ್ರಿಯ ಕಲ್ಲೇಮಠ ಜತೆಗಿದ್ದರು. ಮೆಸ್ಕಾಂ ನ ಎಕ್ಸಿಕ್ಯುಟಿವ್ ಅಫೀಸರ್ ರಾಮಚಂದ್ರ, ಸುಬ್ರಹ್ಮಣ್ಯ ಅಸಿಸ್ಟೆಂಟ್ ಅಫೀಸರ್ ವಸಂತ ಕುಮಾರ್, ಜೂನಿಯರ್ ಇಂಜಿನಿಯರ್ ಚಿದಾನಂದ ಮತ್ತಿತರರೊಂದಿಗೆ ಹರಿಹರದ ಪಲ್ಲತಡ್ಕದಲ್ಲಿ ಮೆಸ್ಕಾಂ ಕೆಲಸದಲ್ಲಿದ್ದು ಅವರೊಂದಿಗೆ ಚರ್ಚಿಸಿದರು.