ಬುಡಕಟ್ಟು ಕುಟುಂಬದ ಸರ್ವೆ ಕಾರ್ಯ

0

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಆಯೋಜನೆ

ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ ಮತ್ತು ಜಾರಿ ಯೋಜನೆಯ ಪ್ರಕಾರ ಮಕ್ಕಳು ಶಾಲೆಗೆ ಹೋಗದಿರಲು ಇರುವ ಸೂಕ್ತ ಕಾರಣ ಸಂಗ್ರಹಿಸುವ ಕುರಿತು ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ವ್ಯಾಪ್ತಿಯಲ್ಲಿ ಬುಡಕಟ್ಟು ಜನರ ಮನೆಗಳ ಸರ್ವೆ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ನಡೆಸಲಾಯಿತು.


ಕಾನೂನು ಸೇವೆಗಳ ಸಮಿತಿಯ ಪ್ಯಾನಲ್ ವಕೀಲರಾದ ಜಗದೀಶ್ ಡಿ ಪಿ ಮತ್ತು ಸಂದೀಪ್ ವಳಲಂಬೆ ಇವರು ಸರ್ವೆ ಕಾರ್ಯ ನಡೆಸಿದ್ದು,ಬಾಳಿಲ ಗ್ರಾಮ ಪಂಚಾಯತ್ ಸದಸ್ಯರಾದ ತ್ರಿವೇಣಿಯವರು ಸಹಕರಿಸಿದರು.