ಜಾಲ್ಸೂರು: ಬೈದರಕೊಳಂಜಿಯಲ್ಲಿ ಬೃಹದಾಕಾರದ ಮರ ಬಿದ್ದು ಕೃಷಿ ತೋಟಕ್ಕೆ ಹಾನಿ

0

ಜಾಲ್ಸೂರು ಗ್ರಾಮದ ಬೈದರಕೊಳಂಜಿ ಎಂಬಲ್ಲಿ ಜು.29ರಂದು ಬೆಳಿಗ್ಗೆ ಬೃಹದಾಕಾರದ ಮರ ಬಿದ್ದು, ಪಕ್ಕದ ಕೃಷಿ ತೋಟಕ್ಕೆ ಹಾನಿಯಾದ ಘಟನೆ ಸಂಭವಿಸಿದೆ.


ಜಾಲ್ಸೂರು ಗ್ರಾಮದ ಶೇಖರ ಕಾಳಮನೆ ಅವರ ತೋಟವು ಬೈದರಕೊಳಂಜಿ ಎಂಬಲ್ಲಿದ್ದು, ಪಕ್ಕದ ಗುಡ್ಡದಲ್ಲಿದ್ದ ಬೃಹದಾಕಾರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದು, ಪಕ್ಕದ ಶೇಖರ ಕಾಳಮನೆ ಅವರ ಕೃಷಿ ತೋಟಕ್ಕೆ ಬಿದ್ದಿತ್ತು. ಇದರಿಂದಾಗಿ ಕೃಷಿ ತೋಟದಲ್ಲಿದ್ದ ಸುಮಾರು ಮೂವತ್ತೈದು ದೊಡ್ಡ ಗಾತ್ರದ ಅಡಿಕೆ ಮರ, ಇಪ್ಪತ್ತಕ್ಕೂ ಅಧಿಕ ಅಡಿಕೆ ಗಿಡ, ಕೊಕ್ಕೋ ಗಿಡಗಳಿಗೆ ಹಾನಿಯಾಗಿದ್ದು, ಎರಡು ತೆಂಗಿನ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇರುವುದಾಗಿ ತಿಳಿದುಬಂದಿದೆ. ಇದರಿಂದ ಅವರಿಗೆ ಅಪಾರ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.