ಕೊನೆಗೂ ಕಂದಾಯ ನಿರೀಕ್ಷಕರ ಕಚೇರಿ ಬಳಿ ಇದ್ದ ಚರಂಡಿ ಹೊಂಡವನ್ನು ಮುಚ್ಚಿದ ನಗರ ಪಂಚಾಯತಿ ಸಿಬ್ಬಂದಿಗಳು

0

ಕಳೆದ ಒಂದು ವರ್ಷಗಳಿಂದ ಸುಳ್ಯ ಕಂದಾಯ ನಿರೀಕ್ಷಕರ ಕಚೇರಿ ಮುಂಭಾಗದಲ್ಲಿ ನಿರ್ಮಾಣವಾಗಿದ್ದ ಚರಂಡಿಯ ಹೊಂಡವನ್ನು ನಗರ ಪಂಚಾಯತ್ ಸಿಬ್ಬಂದಿಗಳು ಸ್ಲ್ಯಾಬ್ ಅಳವಡಿಸಿ ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ.

ಈ ಹೊಂಡದ ಸಮಸ್ಯೆಯ ಕುರಿತು ಸುದ್ದಿ ಪತ್ರಿಕೆಯಲ್ಲಿ ಹಲವಾರು ಬಾರಿ ವರದಿಗಳನ್ನು ಬಿತ್ತರಿಸಿ ಜಾಗೃತಿ ಮೂಡಿಸಲಾಗಿತ್ತು. ಇದೀಗ ಪಂಚಾಯತ್ ಸಿಬ್ಬಂದಿಗಳು ಹೊಂಡ ಮುಚ್ಚುವ ಮೂಲಕ ಉಂಟಾಗಬಹುದಾದ ಅಪಾಯಗಳಿಗೆ ಬ್ರೇಕ್ ತಂದುಕೊಟ್ಟಿದ್ದಾರೆ..