ಕುಕ್ಕಟ್ಟೆ ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ

0

ಮುರುಳ್ಯ ಕುಕ್ಕಟ್ಟೆ ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಅ.15 ರಿಂದ ಅ.23ರವರೆಗೆ ನವರಾತ್ರಿ ಪೂಜಾ ಮಹೋತ್ಸವವು ನಡೆಯುವ ಅಂಗವಾಗಿ ಅ.21 ರಂದು 7ನೇ ಪೂಜೆ ವಿಶೇಷ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆದು, ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯಿತು. ಅ.22ರಂದು ಬೆಳಿಗ್ಗೆ ಶ್ರೀ ದುರ್ಗಾ ಹೋಮ, ಭಜನೆ ವಿಶೇಷ ಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು.

ಈಗಾಗಲೇ ಬ್ರಹ್ಮಕಲಶೋತ್ಸವ ನಡೆದಿದ್ದು. ಜೀರ್ಣೋದ್ಧಾರದ ಉಳಿದ ಭಾಗ ಸುತ್ತು ಪೌಲಿ ಕೆಲಸ ಪ್ರಾರಂಭಿಸಲು ಪ್ರಾರ್ಥನೆ ಸಲ್ಲಿಸಲಾಯಿತು.
ಅನುವಂಶಿಕ ಆಡಳ್ತೆದಾರ ಚಿನ್ನಯ ಆಚಾರ್ಯ, ಸಮಿತಿ ಅಧ್ಯಕ್ಷ ಧನಂಜಯ ಆಚಾರ್ಯ, ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ, ಜನಾರ್ದನ ಆಚಾರ್ಯ ಕಾಣಿಯೂರು, ಸೋಮಪ್ಪ ಗೌಡ, ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ, ಮರೋಲಿ ಸದಸ್ಯರು ಊರ, ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಕ್ಷೇತ್ರದ ಪುರೋಹಿತರಾದ ಬಾಲಕೃಷ್ಣ ಆಚಾರ್ಯರು ವೈಧಿಕ ಕಾರ್ಯಕ್ರಮ ನಡೆಸಿದರು, ರಂಗ ಪೂಜೆ , ಗಣಪತಿಹೋಮ, ದುರ್ಗಾ ನಮಸ್ಕಾರ ಪೂಜೆ, ದೀಪ ನಮಸ್ಕಾರ ಪೂಜೆ , ಪುಷ್ಪ ಪೂಜೆ, ಪಂಚಾಮೃತಭಿಷೇಕ, ಸರಸ್ವತಿ ಪಾರಾಯಣ, ಲಲಿತ ಸಹಸ್ರನಾಮಾರ್ಚಣೆ ಪೂಜೆಗಳು ನಡೆಯಿತು.