ಮಂಡೆಕೋಲಿನಲ್ಲಿ ಗೋಪೂಜೆ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ ಸುಳ್ಯ , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಆಶ್ರಯದಲ್ಲಿ 5 ನೇ ವರ್ಷದ ಗೋಪೂಜೆ ಕಾರ್ಯಕ್ರಮವು ಯುವಜನ ಸಂಯುಕ್ತ ಮಂಡಳಿ‌ ನಿರ್ದೇಶಕಿ ವಿನುತ ಪಾತಿಕಲ್ಲು ಇವರ ಮನೆಯಲ್ಲಿ ನಡೆಯಿತು.

ಪಾತಿಕಲ್ಲು ಕುಟುಂಬದ ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪ್ರವೀಣ್ ಜಯನಗರ , ಕಾರ್ಯದರ್ಶಿ ಗುರುರಾಜ್ ಅಜ್ಜಾವರ , ಕೋಶಾಧಿಕಾರಿ ದಯಾನಂದ ಪಾತಿಕಲ್ಲು , ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ , ನಿರ್ದೇಶಕ ಪ್ರಸಾದ್ ಕಾಟೂರು , ಹಾಗೂ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷರು ಸರೋಜಿನಿ ಮಾವಂಜಿ , ಕಾರ್ಯದರ್ಶಿ ಮೋಹಿನಿ ಮಂಡೆಕೋಲು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು .

ಗೋವುಗಳಿಗೆ ಅಲಂಕಾರ ಮಾಡಿ ಆರತಿ ಮಾಡಿ ದೀಪಾವಳಿಯಲ್ಲಿ ಗೋವುಗಳಿಗೆ ಕೊಡುವ ಆಹಾರವನ್ನು ಕೊಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರವೀಣ್ ಜಯನಗರ ವಹಿಸಿದ್ದರು . ಮೋಹಿನಿ ಮಂಡೆಕೋಲು ಸ್ವಾಗತಿಸಿದರು. ವಿನುತ ಪಾತಿಕಲ್ಲು ಪ್ರಸ್ತಾವನೆ ಯೊಂದಿಗೆ ಗೋಪೂಜೆ ಯ ಮಹತ್ವವನ್ನು ತಿಳಿಸಿದರು . ಸ್ವಾತಿ ಉಗ್ರಣಿಮನೆ ದೇಶಭಕ್ತಿ ಗೀತೆ ಹಾಡಿದರು. ತಿರುಮಲೇಶ್ವರಿ ಪಾತಿ ಕಲ್ಲು ಶ್ಲೋಕ ಅಮೃತವಚನ ಹೇಳಿದರು. ವಸಂತಿ ಉಗ್ರಾಣಿಮನೆ ನಿರೂಪಣೆ ಹಾಗೂ.ಜಾನಕಿ ಕಣೆಮರಡ್ಕ ವಂದಿಸಿದರು. ಸಹಭೋಜನ ದೊಂದಿಗೆ ಕಾರ್ಯಕ್ರಮ ವಿಶೇಷವಾಗಿ ನೆರವೇರಿತು.