ಡಿ. 17: ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ, ಆಮಂತ್ರಣ ಪತ್ರ ಬಿಡುಗಡೆ

0

ಡಿ. 17ರಂದು ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ 12ನೇ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಮತ್ತು ಡಿ.10ರಂದು ಕ್ರೀಡಾ ಕೂಟ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ನ. 15ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರವಿಚಂದ್ರ ಕಾಚಿಲ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ನ.10ರಂದು ಬೆಳಿಗ್ಗೆ 9:30 ರಿಂದ 58 KG ವಿಭಾಗದ ಪುರುಷರ ವಿಭಾಗದ ಮುಕ್ತ ಕಬ್ಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾಟವನ್ನು ಮತ್ತು ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಓಬಯ್ಯ ನಾಯ್ಕ ಮಾಳಪ್ಪಮಕ್ಕಿ,
ಉಪಾಧ್ಯಕ್ಷ ನಾರಾಯಣ ನಾಯ್ಕ ಬೊಳಿಯೂರು, ಬಾಲಕೃಷ್ಣ ನಾಯ್ಕ ಬೊಮ್ಮೆಟ್ಟಿ, ಜತೆ ಕಾರ್ಯದರ್ಶಿ ರಾಜೇಶ್ ಕಾಚಿಲ, ಖಜಾಂಚಿ ಜಯರಾಜ್ ಕಡಂಬುಕಾನ, ಸಂಘಟನಾ ಕಾರ್ಯದರ್ಶಿ
ರವೀಂದ್ರ. ಬಿ, ಜತೆ‌ ಸಂಘಟನಾ ಕಾರ್ಯದರ್ಶಿ ವೆಂಕಟ್ರಮಣ ಧರ್ಮಡ್ಕ ಸಮಿತಿ ಸದಸ್ಯರಾದ ಹುಕ್ರಪ್ಪ ನಾಯ್ಕ ಮಾಳಪ್ಪಮಕ್ಕಿ, ನವೀನ ಕುಮಾರ್ ಮಾಳಿಗೆ, ಪುರುಷೋತ್ತಮ ಬ್ರಾಂತಿಗದ್ದೆ, ಕರುಣಾಕರ ಶೆಟ್ಟಿಗದ್ದೆ, ಜಯಂತ ಆರ್.ಕೆ, ಪರಮೇಶ್ವರ ಕೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ
ತೀರ್ಥಾನಂದ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.