ಪೆರಾಜೆ : ಬಲೇಂದ್ರ ಮರ ಅಲಂಕಾರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0

ಪೆರಾಜೆ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲದ ವತಿಯಿಂದ ಪೆರಾಜೆ ಗ್ರಾಮಸ್ಥರಿಗೆ ದೀಪಾವಳಿ ಪ್ರಯುಕ್ತ ನಡೆದ ಬಲೇಂದ್ರ ಮರ ಅಲಂಕಾರ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಪ್ರಥಮ ಬಹುಮಾನವನ್ನು ಚಿನ್ನಮ್ಮ ಮೂಲೆಮಜಲು, ದ್ವಿತೀಯ ಬಹುಮಾನವನ್ನು ಪುರುಷೋತ್ತಮ ಪೆರಂಗಜೆ, ತೃತೀಯ ಬಹುಮಾನವನ್ನು ಮಜಿಕೋಡಿ ಐನ್ ಮನೆಯವರು ಪಡೆದುಕೊಂಡರು. ಹಾಗೂ ಭಾಗವಹಿಸಿದ ತಂಡಗಳಿಗೆ ಸ್ಮರಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ಜೀವನ್ ಮಜಿಕೋಡಿ, ಸಾಂಸ್ಕೃತಿಕ ಅಧ್ಯಕ್ಷ ರಮೇಶ್ ಮಜಿಕೋಡಿ, ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಂಬಳಚೇರಿ ಹಾಗೂ ಸಂಘದ ಸದಸ್ಯರು ಭಾಗವಹಿಸಿದರು. ತೀರ್ಪುಗಾರರಾಗಿ ದೇವಿಪ್ರಸಾದ್ ಕಾಯರ್ತೋಡಿ ಸಹಕರಿಸಿದರು.