ಕೆರೆಗೆ ಬಿದ್ದ ಹೋರಿಯನ್ನು ರಕ್ಷಿಸಿದ ಸ್ಥಳೀಯರು

0

ಕೆರೆಗೆ ಬಿದ್ದ ಹೋರಿಯನ್ನು ಸ್ಥಳೀಯರು ರಕ್ಷಿಸಿದ ಘಟನೆ ಎಲಿಮಲೆ ಸಮೀಪದ ಜಬಳೆ ಪರಿಸರದಲ್ಲಿ ನಡೆದಿದ್ದು ಈ ಪ್ರದೇಶದಲ್ಲಿ ಬೀಡಾಡಿ ಹೋರಿಗಳಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಚಳ್ಳ ಗೋವಿಂದ ಭಟ್ ಅವರ ತೋಟದ ಕೆರೆಗೆ ಹೋರಿ ಕರುವೊಂದು ಬಿದ್ದಿತ್ತು. ನಂತರ ನೆರೆ ಕೆರೆಯವರ ಸಹಕಾರದಿಂದ ಮೇಲಕ್ಕೆತ್ತಲಾಯಿತು.

ಹೀಗೆ ಕೆಲವು ಹೋರಿ ಕರುಗಳನ್ನು ಎಲಿಮಲೆ, ಜಬಳೆಯ ಹತ್ತಿರ ಕೆಲವೊಂದು ಅನಾಮಧೇಯರು ಬಿಟ್ಟು ಹೋಗುತ್ತಿದ್ದು , ಈ ಹೋರಿಗಳು ತೋಟಗಳಿಗೆ ನುಗ್ಗಿ, ತರಕಾರಿ ಹಾಗೂ ಕೃಷಿ ಕಾರ್ಯಗಳಿಗೆ ಹಾನಿ ಮಾಡುತ್ತಿದೆ.

ಪಂಚಾಯತ್ ನವರು ಈ ಭಾಗದ ಗೋ ಮಾಳವನ್ನು ಗುರುತಿಸಿ ಗೋಪಾಲಕರ ಅನುಕೂಲಕ್ಕೆ ಅನುವು ಮಾಡಿ ಕೊಡಬೇಕು. ಈ ರೀತಿ ಹೋರಿಗಳನ್ನು ಬಿಟ್ಟು ಹೋಗುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.