ಕುಕ್ಕುಜಡ್ಕದ ವಿಷ್ಣುನಗರದಲ್ಲಿ ಇಂದು ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಅಮರಮುಡ್ನೂರಿನ ಕುಕ್ಕುಜಡ್ಕದ ವಿಷ್ಣು ನಗರದಲ್ಲಿ ವರ್ಷಂಪ್ರತಿ ಜರುಗುವಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದುನಡೆಯಲಿರುವುದು. ಬೆಳಗ್ಗೆ ಭಾರತೀಯ ತೀಯ ಸಮಾಜ ಬಾಂಧವರಿಂದ ಮೇಲೆರಿಯ ಅಗ್ನಿ ಕುಂಡದ ಜೋಡಣೆಯ ಕಾರ್ಯವು ಆರಂಭಗೊಂಡಿದೆ.


ಸಂಜೆ ಶ್ರೀ ದೈವದ ಭಂಡಾರ ಏರಿ ಮೇಲೆರಿಗೆ ಅಗ್ನಿ ಸ್ಪರ್ಶವಾಗಿ ಬಳಿಕ ವಿಷ್ಣುಮೂರ್ತಿ ದೈವದ ಕುಲ್ಚಾಟವು ನಡೆಯಲಿದೆ. ನಾಳೆ ಪ್ರಾತ:ಕಾಲ ಶ್ರೀ ದೈವದ ಅಗ್ನಿ ಸೇವೆ ನಡೆದು ಪ್ರಸಾದವಿತರಣೆಯಾಗಲಿದೆ. ರಾತ್ರಿ ಯಕ್ಷಗಾನ ಬಯಲಾಟವು ನಡೆಯಲಿದೆ. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಸಾರ್ವಜನಿಕ ಅನ್ನ ಪ್ರಸಾದವಿತರಣೆಯಾಗಲಿರುವುದು ಎಂದು ಆಡಳಿತ ಸಮಿತಿ ವ್ಯವಸ್ಥಾಪಕರು ತಿಳಿಸಿರುತ್ತಾರೆ.