ಪಂಜ ಸೀಮೆ ದೇವಳದ ಜಾತ್ರೆಗೆ ಗೊನೆ ಕಡಿಯುವ ಕಾರ್ಯಕ್ರಮ

0

ಫೆ.1.ರಂದು ರಾತ್ರಿ ಧ್ವಜಾರೋಹಣ

ಫೆ.5 : ಹಗಲು ದರ್ಶನ ಬಲಿ, ಫೆ.6 ರಂದು ರಾತ್ರಿ ಬ್ರಹ್ಮರಥೋತ್ಸವ

ಪಂಜ ಸೀಮೆ ದೇವಾಲಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಕಡಿಯುವ ಕಾರ್ಯಕ್ರಮ ಜ.24.ರಂದು ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.

ಕುದ್ವ ತೋಟದಲ್ಲಿ ಗೊನೆ ಕಡಿದು ಪೂರ್ವ ಸಂಪ್ರದಾಯದಂತೆ ಬ್ಯಾಂಡ್ ವಾಲಗ ಮೆರವಣಿಗೆ ಮೂಲಕ‌ ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸದಸ್ಯರಾದ
ಬಾಲಕೃಷ್ಣ ಗೌಡ ಕುದ್ವ, ಧರ್ಮಪಾಲ ಗೌಡ ಮರಕಡ ಕಾಚಿಲ,ಗಂಗಾಧರ ಗುಂಡಡ್ಕ ಶ್ರೀಮತಿ ಪವಿತ್ರ ಕುದ್ವ ಮಲ್ಲೆಟಿ, ರಜಿತ್ ಭಟ್ ಪಂಜಬೀಡು,ಸಂತೋಷ್ ರೈ ಪಲ್ಲತ್ತಡ್ಕ, ತಿಮ್ಮಪ್ಪ ಗೌಡ ಪುತ್ಯ, ರಮೇಶ್ ಕುದ್ವ, ಧರ್ಮಣ್ಣ ನಾಯ್ಕ ಗರಡಿ, ಕೇಶವ ಕುದ್ವ, ಗಂಗಾಧರ ಮರಕಡ, ದೀಕ್ಷಿತ್ ಸಂಪ,ಸದಾಶಿವ ಸಂಪ, ಕುಶಾಲಪ್ಪ ಗೌಡ ದೊಡ್ಡಮನೆ, ಕುಮಾರ ಕಕ್ಯಾನ,ಮೇದಪ್ಪ ಗೌಡ ಪಂಬೆತ್ತಾಡಿ, ರವಿ ನಾಗತೀರ್ಥ,ಕೆ.ಟಿ.ರಾಮಕೃಷ್ಣ , ರಾಮಚಂದ್ರ ಭಟ್ ಕುದ್ವ, ದಿನೇಶ್ ಪುಂಡಿಮನೆ , ಲಕ್ಷ್ಮಣ ಗೌಡ ಬೊಳ್ಳಾಜೆ,ಉಜ್ವಲ್ ಚಿದ್ಗಲ್ಲು, ಕರುಣಾಕರ ಕಜೆ, ಪರಮೇಶ್ವರ ಬಿಳಿಮಲೆ, ಲೋಕೇಶ್ ಆಕ್ರಿಕಟ್ಟೆ, ರೋಹಿತ್ ಪಂಬೆತ್ತಾಡಿ, ಪ್ರಶಾಂತ್ ಅಳ್ಪೆ,ದೇವಳದ ಅರ್ಚಕರು, ಸಿಬ್ಬಂದಿಗಳು,

ಉತ್ಸವ ಸಮಿತಿಯ ಸಂಚಾಲಕರು, ಸದಸ್ಯರು,ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.


ಜ.26 ಮತ್ತು ಜ.28ರಂದು ಸೀಮೆಯ ಭಕ್ತರಿಂದ ಸಾಮೂಹಿಕ ಶ್ರಮದಾನ ಜರುಗಲಿದೆ.
ಫೆ.1. ರಂದು ರಾತ್ರಿ ಧ್ವಜಾರೋಹಣ ನಡೆಯಲಿದೆ.
ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ,ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.
ಫೆ.7ರಂದು ರಾತ್ರಿ
ಕಾಚುಕುಜುಂಬ ದೈವದ ನೇಮ,.ಫೆ.8 ರಂದು ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ ಜರುಗಲಿದೆ.