ಜಾಲ್ಸೂರು: ವಿನೋಬನಗರ ಸುಬ್ರಾಯ ಅನಂತ ಕಾಮತ್ & ಸನ್ಸ್ ಸಂಸ್ಥೆಯ ಸುವರ್ಣ ಮಹೋತ್ಸವ ಹಿನ್ನೆಲೆ

0

ಕಾಶಿ ಮಠಾಧಿಪತಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ – ಆಶೀರ್ವಚನ

ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಕಳೆದ ಐವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸುಬ್ರಾಯ ಅನಂತ ಕಾಮತ್ & ಸನ್ಸ್ ಗೇರುಬೀಜ ಕಾರ್ಖಾನೆಗೆ ಕಾಶಿ ಮಠಾಧಿಪತಿಗಳಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಫೆ.3ರಂದು ಭೇಟಿ ನೀಡಿ ಆಶೀರ್ವಚನ ನೀಡಿದರು.

ಶ್ರೀ ಸುಬ್ರಾಯ ಅನಂತ ಕಾಮತ್ & ಸನ್ಸ್ ಸಂಸ್ಥೆಯು ಯಶಸ್ವಿ ಐವತ್ತು ವರ್ಷಗಳನ್ನು ಪೂರೈಸಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಕಾಶಿ ಮಠಾಧಿಮತಿಗಳು ಭೇಟಿ ನೀಡಿದರು.

ಸಂಸ್ಥೆಯ ಮಾಲಕರಾದ ಸುಧಾಕರ ಕಾಮತ್ ಮತ್ತು ಶ್ರೀಮತಿ ಶುಭಾ ಸುಧಾಕರ ಕಾಮತ್ ದಂಪತಿಗಳು ಸ್ವಾಮೀಜಿಯವರನ್ನು ಸ್ವಾಗತಿಸಿ, ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆ ಸಂಸ್ಥಾಪಕರಾದ ಉಪೇಂದ್ರ ಕಾಮತ್ ಹಾಗೂ ಶ್ರೀಮತಿ ಪದ್ಮಾವತಿ ಕಾಮತ್ ದಂಪತಿಗಳು ಉಪಸ್ಥಿತರಿದ್ದರು.