ಹರಿಹರ ಪಲ್ಲತಡ್ಕ ಗ್ರಾ.ಪಂ.ನ ಗ್ರಾಮ ಸಭೆ

0

ಗ್ರಾ.ಪಂ ರಸ್ತೆ, ಬೀದಿ ಬದಿ ಪ್ಯಾಪಾರಿಗಳಿಗೆ ಸಹಾಯ ಧನ, ಪರ್ಯಾಯ ಬೆಳೆ ಬಗ್ಗೆ ಚರ್ಚೆ

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಗ್ರಾಮ ಸಭೆ ಫೆ.15 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ವಿಜಯ ಅಂಙಣ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಜಯಂತ ಬಾಳುಗೋಡು, ಗ್ರಾ.ಪಂ ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು ಪಿ, ಶಾರದ ಕೊತ್ನಡ್ಕ, ಪಿಡಿಒ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಜಗದೀಶ ರುದ್ರ ಗೌಡ ಪಾಟೀಲ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾ.ಪಂ . ನ ರಸ್ತೆ, ಬೀದಿ ಬದಿ ಪ್ಯಾಪಾರಿಗಳಿಗೆ ಸಹಾಯ ಧನ, ಪರ್ಯಾಯ ಬೆಳೆ ಬಗ್ಗೆ ಚರ್ಚೆ, ಜೆ.ಜೆ. ಎಂ ನೀರಿನ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು.

ಇಲಾಖಾಧಿಕಾರಿಗಳಾದ ಮೆಸ್ಕಾಂ ನ ಬಾಲಕೃಷ್ಣ, ಅರಣ್ಯ ಇಲಾಖೆಯ ಮನೋಜ್, ಪಿ.ಡಬ್ಲ್ಯೂ.ಡಿ ಯ ಇಂಜಿನಿಯರ್ ಜನಾರ್ದನ ಆಚಾರ್ಯ, ಕಂದಾಯ ಇಲಾಖೆಯ ಮಧು ಕೆ.ಬಿ , ಬಿ.ಸಿ.ಎಂ ಇಲಾಖೆಯ ಸದ್ದಾಂ ಇಲಾಖಾ ಮಾಹಿತಿ ನೀಡಿದರು.
ಪಿಡಿಒ ಶ್ಯಾಮ್ ಪ್ರಸಾದ್ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಪಂಚಾಯತ್ ಸಿಬ್ಬಂದಿ ಇಂದಿರಾಂಭ ವರದಿ ವಾಚನ ಮಾಡಿದರು. ಶ್ಯಾಮ್ ಪ್ರಸಾದ್ ವಂದಿಸಿದರು.