ಬೆಂಗಳೂರಿನಲ್ಲಿ ಸಜ್ಜನ ಪ್ರತಿಷ್ಠಾನ ವತಿಯಿಂದ ಕಾರ್ಯಗಾರ

0

ಆಂತರಿಕ ವಿಚಾರಣೆ ಮತ್ತು ಶಿಸ್ತು ಕ್ರಮ ಎಂಬ ವಿಷಯದಲ್ಲಿ ಬಗ್ಗೆ ಮಾಹಿತಿ

ಹಲವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಬೆಂಗಳೂರಿನ ವೈಟ್ ಫೀಲ್ಡ್ ಕೈಗಾರಿಕಾ ವಲಯ ಮಹದೇವಪುರ ವ್ಯಾಪ್ತಿಯಲ್ಲಿರುವ ವಾಸಿಯ ದಲ್ಲಿ ಫೆಬ್ರವರಿ 24, ರಂದು ಆಂತರಿಕ ವಿಚಾರಣೆ ಮತ್ತು ಶಿಸ್ತು ಕ್ರಮ ಎಂಬ ವಿಷಯದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆಯವರು ವಹಿಸಿದರು.

ಬೆಂಗಳೂರಿನ ಸಸ್ಮೋಸ್ ಗ್ರೂಪ್ ಆಫ್ ಕಂಪನೀಸ್, ಬೆಂಗಳೂರು
ಇದರ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರು ರಾಜಶೇಖರ ರೈ,ರವರು ಕಾರ್ಯಗಾರವನ್ನು ಉದ್ಘಾಟಿಸಿದರು.

ಎ ಎ ಪಾರ್ಟ್ನರ್ ನ ಖ್ಯಾತ ಹಿರಿಯ ವಕೀಲರು, ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರು ಹಾಗೂ ಖ್ಯಾತ ತರಬೇತುದಾರರಾದ ಶ್ರೀ ಮಂಜುನಾಥ ಬಿ ಮತ್ತು ಐಮ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಹೆಡ್ – ಹೆಚ್ ಆರ್ & ಐ ಆರ್ ಆಗಿರುವ ಶ್ರೀ ವಿನಯ್ ಎಂ ಎಸ್ ರವರು ತರಬೇತಿ ನೀಡಿದರು.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಲಗುನ ಕ್ಲೋತಿಂಗ್ ಮಾನವ ಸಂಪನ್ಮೂಲ ವಿಭಾಗ ಮುಖ್ಯಸ್ಥ ಸದಾಶಿವ, ವ್ಯಪಿ ಲೆಕ್ಸ್ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಚೀಪ್ -ಪೀಪಲ್&ಕಲ್ಚರ್ ಶ್ರೀಮತಿ ಕಲಾ ಬೋಸ್,ಬಿಎಫ್ಎ ಧುರೀಣ ನಟರಾಜು,ಬೆಂಗಳೂರು ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ಮುಖ್ಯಸ್ಥ ಆರೀಸ್ ಪಿ ಎಂ,
ಬಯೋಪ್ಲಸ್ ಲೈಫ್ ಸೈನ್ಸೆಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಮಾನವ ಸಂಪನ್ಮೂಲ ಅಭಿವೃದ್ಧಿ‌ ವಿಭಾಗದ ವ್ಯವಸ್ಥಾಪಕ ಹೇಮಂತ್ ಪಟೇಲ್‌ ಸೇರಿದಂತೆ
ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಿವಿಧ ಕಂಪನಿಯ ಹಲವಾರು, ಮಾನವ ಸಂಪನ್ಮೂಲ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಪೂರ್ವಾಹ್ನ 9:00 ರಿಂದ ಪ್ರಾರಂಭವಾದ ಕಾರ್ಯಗಾರ ಸಾಯಂಕಾಲ 5:00 ರ ವರೆಗೆ ಯಶಸ್ವಿಯಾಗಿ ನಡೆಯಿತು. ಕಾರ್ಯಗಾರದಲ್ಲಿ ವಿಕ್ರಂ ಸಾಗರ್ ಸಕ್ಸೆನ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಶಶಾಂಕ್ ವಂದಿಸಿದರು.