ಮಾನವೀಯತೆ ಮೆರೆದ ಅಟೋ ಚಾಲಕ

0

ಸುಳ್ಯದ ಅಟೋ ಚಾಲಕ ಶರತ್ ಕುಮಾರ್ ತುದಿಯಡ್ಕ ರವರು ತನ್ನ ಅಟೋದಲ್ಲಿ ಎಡಮಂಗಲಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಕರಿಂಬಿಲ ಎಂಬಲ್ಲಿ ಬೈಕ್- ಬೈಕ್ ಅಪಘಾತವಾಗಿದ್ದು, 9 ನೇ ತರಗತಿಯ ವಿದ್ಯಾರ್ಥಿ ಪ್ರತೀಕ್ ಎಂಬವರು ಗಂಭೀರ ಗಾಯಗೊಂಡು ಬಿದ್ದಿದ್ದರು.

ಅವರನ್ನು ಕೂಡಲೇ ಶರತ್ ಕುಮಾರ್ ರವರು ತನ್ನ ರಿಕ್ಷಾದಲ್ಲಿ ಹಾಕಿಕೊಂಡು 11 ಕಿ.ಮೀ ದೂರವನ್ನು 9 ನಿಮಿಷದಲ್ಲಿ ಕಾಣಿಯೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಸರಕಾರಿ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ಕೊಂಡೊಯ್ಯಲು ಸೂಚಿಸಿದ ಮೇರೆಗೆ ಕಾಣಿಯೂರಿನ ಕುಮಾರ್ ಕ್ಲೀನಿಕ್ ಗೆ ಕೊಂಡೊಯ್ದರು.

ನಂತರ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಾಲಕನ ಪೋಷಕರು ಬಂದ ನಂತರ ಆಸ್ಪತ್ರೆಯಿಂದ ಹಿಂತಿರುಗಿದರು. ಅವರ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.