ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪ ಮೇಲ್ಚಾವಣಿಯಲ್ಲಿ ಗಾಂಜಾ ಗಿಡ ಬೆಳೆಸಿದ ಆರೋಪ, ಪರಿಶೀಲನೆ ವೇಳೆ ನಾಪತ್ತೆ

0

ಕುಕ್ಕೆ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪ ದ ಮೇಲ್ಚಾವಣಿಯಲ್ಲಿ ಗಾಂಜಾ ಪತ್ತೆಯಾದ ಆರೋಪ ಕೇಳಿ ಬಂದಿದೆ.

ಗಾಂಜಾ ಗಿಡ ಇರುವ ಬಗ್ಗೆ ಗಮನಿಸಿದ ಸ್ಥಳೀಯರು ಅದರ ಪೋಟೋ ತೆಗೆದು ಪೊಲೀಸರಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರನ್ನಲಾಗಿದ್ದು ಪರಿಶೀಲನೆ ವೇಳೆ ಗಾಂಜಾ ಗಿಡ ಇತ್ತೆನ್ನುವ ಜಾಗದಲ್ಲಿ ಗಿಡ ಇರಲಿಲ್ಲವೆಂದು ತಿಳಿದು ಬಂದಿದೆ.

ಸುಮಾರು 4 ರಿಂದ 5ಫೀಟ್ ಎತ್ತರ ಬೆಳೆದಿರುವ ಗಾಂಜಾ ಗಿಡ ನೆಟ್ಟದ್ದು ಯಾರು? ತೆರವುಗೊಳಿಸಿರುವುದು ಯಾರು ? ಎಂಬ ಬಗ್ಗೆ ಎಂಬ ಸಂಶಯ ಎದ್ದಿದ್ದು ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ.