ಕೇರ್ಪಡ ಕೂಡುಕಟ್ಟು ಶಿರಾಡಿ ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠ ಉತ್ಸವ -ತಂಬಿಲ

0

ಕೇರ್ಪಡ ಕೂಡುಕಟ್ಟು ಬೊಳ್ಕಜೆ ಸ್ಥಾನ ಚಾವಡಿಯಲ್ಲಿ, ಉಳ್ಳಾಕುಲು ಶಿರಾಡಿ ರಾಜನ್ ಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವವು ಜೂ. 19 ರಂದು ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಎಂಜೀರು, ಕಾರ್ಯದರ್ಶಿ ಸಾಯಿಪ್ರಸಾದ್ ಬೊಳ್ಕಜೆ, ಖಜಾಂಜಿ ಅವಿನಾಶ್ ದೇವರಮಜಲು, ಕೇರ್ಪಡ ಊರು ಗೌಡ ಚೆನ್ನಪ್ಪ ಗೌಡ, ಆನಂದ ಗೌಡ ಕೇರ್ಪಡ, ಶಿವಾನಂದ ಬೊಳ್ಕಜೆ, ಚಂದ್ರಶೇಖರ ಬೊಳ್ಕಜೆ, ಗುಣವತಿ ನಾವೂರು, ಜಯಂತ ನಾಗನಕಜೆ, ಮತ್ತಿತ್ತರರು ಉಪಸ್ಥಿತರಿದ್ದರು.