ಗಾಂಧಿನಗರ ಕೆಪಿಎಸ್ : ರಸ್ತೆಗೆ ವಾಲಿ ಕಾಂಪೌಂಡ್ ತೆರವು ಕಾರ್ಯ

0

ಸುಳ್ಯ ಗಾಂಧಿನಗರ ‌ಕೆಪಿಎಸ್ ಶಾಲಾ ಕ್ರೀಡಾಂಗಣದ ಕಾಂಪೌಂಡ್ ರಸ್ತೆಗೆ ವಾಲಿ ನಿಂತಿದ್ದು ಅದನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ.

ಶಾಲಾ ಕ್ರೀಡಾಂಗಣದ ಕಾಂಪೌಂಡ್ ರಸ್ತೆಗೆ ವಾಲಿ ನಿಂತಿದ್ದು ಅದನ್ನು ತೆರವು ಮಾಡುವಂತೆ ಇತ್ತೀಚೆಗೆ ಶಾಲಾ ಪೋಷಕರ ಸಭೆಯಲ್ಲಿ ಪ್ರಸ್ತಾಪವಾಗಿದ್ದು‌ ತೆರವಿಗೆ ನಿರ್ಣಯ ಮಾಡಲಾಗಿತ್ತು.

ಇಂದು ಶಾಲಾಭಿವೃದ್ದಿ ಸಮಿತಿಯ ಚಿದಾನಂದ ಕುದ್ಪಾಜೆ ಹಾಗೂ ನ.ಪಂ. ಸದಸ್ಯ ಶರೀಫ್ ಕಂಠಿಯವರ ಮುಂದಾಳತ್ವ ದಲ್ಲಿ ತೆರವು ಕಾರ್ಯ ನಡೆಯುತ್ತಿರುವುದಾಗಿ ತಿಳಿದುಬಂದಿದೆ.