ಬೆಟ್ಟ ಯಾದವ ಸಭಾ ಪ್ರಾದೇಶಿಕ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ

0


ಬೆಟ್ಟ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ರಿ. ಪ್ರಾದೇಶಿಕ ಸಮಿತಿ ಬೆಟ್ಟ ಇದರ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಜು. ೧೪ರಂದು ಗೋಪಾಲಕೃಷ್ಣ ಬೊಳ್ಳಾಜೆಯವರ ಮನೆಯಲ್ಲಿ ನಡೆಯಿತು.


ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಟ್ಟ ಪ್ರಾದೇಶಿಕ ಸಮಿತಿ ಅಧ್ಯಕ್ಷ ಚಂದ್ರಹಾಸ ಕೀಲಾರ್‌ಕಜೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಕಾರ್ಯದರ್ಶಿ ಕೃಷ್ಣ ಬೆಟ್ಟ, ಮಹಿಳಾ ವೇದಿಕೆ ಬೆಟ್ಟ ಪ್ರಾದೇಶಿಕ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಕುಸುಮಾ ಬೆಟ್ಟ ವಿಶೇಷ ಆಹ್ವಾನಿತರಾಗಿದ್ದರು.


ಹಿರಿಯರ ಕ್ರೀಡಾಕೂಟದಲ್ಲಿ ಚಿನ್ನಹಾಗೂ ಬೆಳ್ಳಿ ಪದಕ ಗಳಿಸಿದ ಲಕ್ಷಣ ಬೊಳ್ಳಾಜೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೆಟ್ಟ ಯಾದವ ಸಭಾ ಪ್ರಾದೇಶಿಕ ಸಮಿತಿ ಕೋಶಾಧಿಕಾರಿ ಅಶೋಕ ಕೀಲಾರ್‌ಕಜೆ ವೇದಿಕೆಯಲ್ಲಿದ್ದರು.
ಲೀಲಾವತಿ ಬೆಟ್ಟ ಸ್ವಾಗತಿಸಿದರು. ಕಾವ್ಯರವರು ವರದಿ ವಾಚಿಸಿದರು. ಮಾನ್ವಿ, ಹಾಗೂ ಗಾನವಿ ಕೀಲಾರ್‌ಕಜೆ ಪ್ರಾರ್ಥಿಸಿದರು.ಶೀಲಾವತಿ ಬೊಳ್ಳಾಜೆ ಸನ್ಮಾನ ಪತ್ರ ವಾಚಿಸಿದರು. ಪ್ರಮೋದ್ ಬೊಳ್ಳಾಜೆ ವಂದಿಸಿದರು. ಅಶೋಕ್ ಬೆಟ್ಟ ಕಾರ್ಯಕ್ರಮ ನಿರೂಪಿಸಿದರು. ಗೋಪಾಲಕೃಷ್ಣ ಬೊಳ್ಳಾಜೆ ಉಪಾಹಾರದ ವ್ಯವಸ್ಥೆ ಮಾಡಿದರು.