ನೇಮಿರಾಜ್ ಚಿಕ್ಮುಳಿ ಮಾಲಕತ್ವದ ಮಯೂರ ಟ್ರೇಡರ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಓಡಬಾಯಿಯ ಪಟ್ರುಕೋಡಿ ಕಾಂಪ್ಲೆಕ್ಸ್ ಬಳಿ ಕಾರ್ಯನಿರ್ವಹಿಸುತ್ತಿದ್ದ ನೇಮಿರಾಜ್ ಚಿಕ್ಮುಳಿಯವರ ಮಾಲಕತ್ವದ ಮಯೂರ್ ಟ್ರೇಡರ್ಸ್ ಹಳೆಗೇಟಿನ ವಿದ್ಯಾನಗರದ ಆರ್.ಕೆ ಟವರ್ ಗೆ (ಜೆ.ಕೆ. ಟೈಯರ್ ಹತ್ತಿರ) ಸ್ಥಳಾಂತರಗೊಂಡು ಜುಲೈ 15 ರಂದು ಗಣಹೋಮದೊಂದಿಗೆ ಕಾರ್ಯರಂಭಗೊಂಡಿದೆ.

ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ಸುಳ್ಯ ಸಿಟಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮುರಳಿಧರ ರೈ, ನ್ಯಾಯವಾದಿ ಜಯಪ್ರಕಾಶ್ ಬೈತಡ್ಕ, ಶ್ರೀಮತಿ ನೀಲಮ್ಮ ಕಡವೆಪಳ್ಳ, ಚಂದ್ರಶೇಖರ ಮಾಸ್ಟರ್, ಮುರಳಿ ಕುತ್ಪಾಜೆ, ಮಂಜಪ್ಪ ಗೌಡ ಚಿಕ್ಮುಳಿ, ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ನವೀನ್ ಚಿಕ್ಮುಳಿ ಉಪಸ್ಥಿತರಿದ್ದರು.

ಮಾಲಕ ನೇಮಿರಾಜ್ ಚಿಕ್ಮುಳಿಯವರ ಧರ್ಮಪತ್ನಿ ಶ್ರೀಮತಿ ಚೇತನಾ, ಮಗ ಮಯೂರ್, ಮಗಳು ಶಾರ್ವರಿ ಎಲ್ಲರನ್ನು ಸ್ವಾಗತಿಸಿದರು. ಸಿಬ್ಬಂದಿ ಮಂಜುನಾಥ ಸಹಕರಿಸಿದರು.

ಇಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ, ಗೇರುಬೀಜ, ತೆಂಗಿನಕಾಯಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು
ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.