ಪೆರಾಜೆ: ಬಂಗಾರಕೋಡಿಯ ಯುವಕ ನಾಪತ್ತೆ – ಪೊಲೀಸ್ ದೂರು ದಾಖಲು

0

ಪೆರಾಜೆ ಗ್ರಾಮದ ಬಂಗಾರಕೋಡಿ ದರ್ಬೆಮಜಲಿನ ಯುವಕನೋರ್ವ ಜ.26ರಿಂದ ನಾಪತ್ತೆಯಾಗಿದ್ದು, ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ಪೆರಾಜೆಯ ಬಂಗಾರಕೋಡಿ – ದರ್ಬೆಮಜಲಿನ ಚಂದ್ರಶೇಖರ ಹಾಗೂ ಶ್ರೀಮತಿ ಅನಂತೇಶ್ವರಿ ಎಂಬವರ ಪುತ್ರ ಶಿವರಾಜ್ ಕುಮಾರ್ ಜ.26ರಂದು ಮನೆಯಿಂದ ಹೋದವರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ 35 ವರ್ಷ ವಯಸ್ಸಾಗಿದ್ದು, ಅವಿವಾಹಿತರಾಗಿದ್ದಾರೆ.
ಕನ್ನಡ, ತುಳು, ಅರೆಭಾಷೆ, ಮಲೆಯಾಳಂ ಭಾಷೆ ಮಾತನಾಡುವ ಶಿವರಾಜ್ ಕುಮಾರ್ ಅವರು ಲಾರಿ ಚಾಲಕರಾಗಿ ದುಡಿಯುತ್ತಿದ್ದು, ಮಗ ನಾಪತ್ತೆಯಾಗಿರುವ ಕುರಿತು ಅವರ ತಂದೆ ಚಂದ್ರಶೇಖರ ಅವರು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.