ಜ್ಯೋತಿ ಪ್ರೌಢಶಾಲೆಯಲ್ಲಿ ವಿಜ್ರಂಭಣೆಯಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ

0

ಜ್ಯೋತಿ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಸೃಷ್ಟಿ ಮೊಬೈಲ್ಸ್ ಮಾಲಕರಾದ ಶ್ರೀ ಶೈಲೇಂದ್ರ ಸರಳಾಯ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾದ ಡಾ.ಎನ್ .ಎ.ಜ್ಞಾನೇಶ್ , ಕಾರ್ಯದರ್ಶಿಗಳಾದ ಹರಿಶ್ಚಂದ್ರ ಮುಡುಕಜೆ, ನಿರ್ದೇಶಕರಾದ ಅಶೋಕ ಪೀಟೆ, ಪೋಷಕ ಸಮಿತಿ ಅಧ್ಯಕ್ಷರಾದ ಜಯರಾಮ ಕದಿಕಡ್ಕ, ಉಪಾಧ್ಯಕ್ಷರಾದ ಧರ್ಮಪಾಲ ಪೀಟೆ, ಮುಖ್ಯ ಶಿಕ್ಷಕರಾದ ಬಿ . ಆರ್ ನಾಗರಾಜ್, ಶಿಕ್ಷಕ ವೃಂದದವರು ಭಾಗವಹಿಸಿದ್ದರು .

ಕಾರ್ಯಕ್ರಮದ ನಂತರ ಅಗ್ನಿ ಯುವಕ ಮಂಡಲ ಪೆರಾಜೆ ಇದರ ವತಿಯಿಂದ ತೆಂಗಿನ ಸಸಿಗಳನ್ನು ಶಾಲಾ ಸರಹದ್ದಿನ ಸುತ್ತೆ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.