ಸುಬ್ರಮಣ್ಯ : ಮಕ್ಕಳ ವೃಂದದಿಂದ ಅಷ್ಟಮಿ ಅಂಗವಾಗಿ ಕ್ರಿಕೆಟ್ ಪಂದ್ಯಾಟ

0

ಸುಬ್ರಮಣ್ಯ ದ ಮಕ್ಕಳವೃಂದ ಇದರ ವತಿಯಿಂದ ನಡೆಯಲಿರುವ ಪ್ರಥಮ ವರ್ಷದ ಶ್ರೀಕೃಷ್ಣಾಷ್ಟಮಿ ಅಂಗವಾಗಿ ಆ.18 ರಂದು 30 ಗಜಗಳ 7 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಸಂದೇಶ್ ಕೋಡಿಕಜೆ ಇವರು ಪಂದ್ಯಾಟ ಉದ್ಘಾಟಿಸಿದರು.
24 ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಕೋಲ್ಪೆ ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡು ಬಹುಮಾನ ಪಡೆದು ಕೊಂಡಿತು. ಕುಕ್ಕೆ ಸಿಕ್ಸರ್ ತಂಡವು ದ್ವಿತೀಯ ಸ್ಥಾನ ಪಡೆಯಿತು.