ನಿಂತಿಕಲ್ಲು: ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ

0

ಲಯನ್ಸ್ ಕ್ಲಬ್ ಪಂಜ ಮತ್ತು ಕೆ ಎಸ್ ಗೌಡ ಶಿಕ್ಷಣ ಸಂಸ್ಥೆಗಳು ನಿಂತಿಕಲ್ಲು ಇದರ ವತಿಯಿಂದ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಗಾರ ಆ. 31ರಂದು ನಿಂತಿಕಲ್ಲು ಕೆಎಸ್ ಗೌಡ ಶಿಕ್ಷಣ ಸಂಸ್ಥೆಯಲ್ಲಿ ಜರುಗಿತು.

ಕೆ ಎಸ್ ಗೌಡ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಶೋಕ್ ಕುಮಾರ್ ಕೆ ಎಸ್ ಉದ್ಘಾಟಿಸಿದರು.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದರು.

ಕೆ ಎಸ್ ಗೌಡ ಪಿ ಯು ಕಾಲೇಜು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ ಪಟ್ಟಾಜೆ, ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಅರಿವು ಕೃಷಿ ಕ್ಲಿನಿಕ್ ಹೊನ್ನಪ್ಪ ಗೌಡ ಬನ್ನೂರು, ಪ್ರಾಂಶುಪಾಲ ಸದಾನಂದ ರೈ ಕೂವೆಂಜ,ಕಾರ್ಯಕ್ರಮ ಸಂಯೋಜಕ ಕುಮಾರಸ್ವಾಮಿ ಕೆ ಎಸ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕುಮಾರ‌ಸ್ವಾಮಿ ಕೆ.ಎಸ್ ಸ್ವಾಗತಿಸಿದರು. ಮೋಹನ್ ದಾಸ್ ಕೂಟಾಜೆ ವಂದಿಸಿದರು.