ಸುಳ್ಯದಲ್ಲಿ ನಡೆದ ಗಾಂಧಿನಡಿಗೆ ಕಾರ್ಯಕ್ರಮದಲ್ಲಿ ತಂಪು ಪಾನಿಯ ವಿತರಿಸಿದ ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘ

0

ಅ 2 ರಂದು ಸುಳ್ಯ ಗಾಂಧಿ ಚಿಂತನ ವೇದಿಕೆ ಮತ್ತು ವಿವಿಧ ಸಂಘ ಸಂಸ್ಥೆ ಗಳ ಆಶ್ರಯದಲ್ಲಿ ನಡೆದ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕ ಸಂಘದ ವತಿಯಿಂದ ತಂಪು ಪಾನಿಯ ವಿತರಿಸಲಾಯಿತು.

ಗಾಂಧಿನಗರ ಗಾಂಧಿ ಪಾರ್ಕ್ ಬಳಿ ತಂಪು ಪಾನಿಯದ ವ್ಯವಸ್ಥೆಯನ್ನು ಸಂಘದವರು ಮಾಡಿದ್ದರು. ಜ್ಯೋತಿ ವೃತದಿಂದ ಕಾಲ್ನಡಿಗೆಯಲ್ಲಿ ಬಿಸಿಲಿನ ಬೇಗೆಯಲ್ಲಿ ಬಂದ ನೂರಾರು ಮಂದಿ ತಂಪು ಪಾನಿಯ ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ, ಮಾಧ್ಯಮ ಕಾರ್ಯದರ್ಶಿ ರಫೀಕ್ ಬಾಳೆಮಕ್ಕಿ, ಉಪಾಧ್ಯಕ್ಷ ಉನೈಸ್ ಪೆರಾಜೆ, ಹಾಗೂ ಸದಸ್ಯರುಗಳು ಸಹಕರಿಸಿದರು.