ವಿಜಯಕುಮಾರ್ ಗುರುಂಪು ನಿಧನ

0

ಗುರುಂಪು ನಿವಾಸಿ ವಿಜಯಕುಮಾರ್ ೫೦ ವರ್ಷ ಹೃದಯ ಸಂಬಂಧ ಖಾಯಿಲೆಯಿಂದ ಅ ೧೭ ರಂದು ಮುಂಜಾನೆ ಗುರುಂಪು ಅವರ ನಿವಾಸದಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳ ಹಿಂದೆ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚೇತರಿಕೆಯಾಗದ ಕಾರಣ ಮತ್ತೆ ಅವರನ್ನು ಸುಳ್ಯಕ್ಕೆ ಕರೆತರಲಾಗಿತ್ತು.
ಆಸ್ಪತ್ರೆಯಿಂದ ಮನೆಗೆ ಕರೆತಂದು ಎರಡು ದಿನದ ನಂತರ ಅವರು ಕೊನೆ ಉಸಿರೆಳೆದರು.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು.
ಇವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ತರಲು, ಅಲ್ಲದೆ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕೊಡಿಯಾಲಬೈಲು ರುದ್ರಭೂಮಿಗೆ ರವಾನಿಸಲು ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ವತಿಯಿಂದ ಉಚಿತ ಸೇವೆ ನೀಡಿ ಸಹಕರಿಸಿದರು. ಸದಸ್ಯರುಗಳಾದ ಲೈಫ್ ಕೇರ್ ಅಂಬುಲೆನ್ಸ್ ರಫೀಕ್ ಸಿದ್ದೀಕ್ ಗೂನಡ್ಕ, ಶಿವ ಅಂಬುಲೆನ್ಸ್‌ನ ಶಿವ ಹಾಗೂ ಮಿಥುನ್ ಸಹಕರಿಸಿದರು.
ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.