ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಸಂಭ್ರಮದ ಜಾತ್ರೋತ್ಸವ

0

ಧ್ವಜಾರೋಹಣ,ಬಯನ ಬಲಿ,ರಾತ್ರಿ ಪೂಜೆ, ಶ್ರೀ ದೇವರ ನೃತ್ಯ ಬಲಿ

ಫೆ.16 ರಂದು ರಾಜಾಂಗಣ ಪ್ರಸಾದ,ಬಟ್ಟಲು ಕಾಣಿಕೆ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವವು ಫೆ.12 ರಿಂದ ಪ್ರಾರಂಭಗೊಂಡಿದ್ದು ಫೆ.16 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಫೆ.12 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಉದಯ ಕುಮಾರ್ ಕೆ.ಟಿ.ಪೂಜಾ ಕಾರ್ಯ ನೆರವೇರಿಸಿದರು.
ಸಂಜೆ ತಂತ್ರಿಗಳ ಆಗಮನ,ಸ್ವಾಗತ, ಪ್ರಾರ್ಥನೆ,ದೀಪಾರಾಧನೆ ನಡೆಯಿತು.
ಬಳಿಕ ಧ್ವಜಾರೋಹಣ,ಬಯನ ಬಲಿ,ರಾತ್ರಿ ಪೂಜೆ,ನೃತ್ಯ ಬಲಿ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ,ಸದಸ್ಯರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಫೆ.13 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾ:ಪೂಜೆ,ಬೆಳಿಗ್ಗೆ ಗಂಟೆ 8.00 ಕ್ಕೆ ಶಿವೇಲಿ,ನವಕ ಕಲಶಾಭಿಷೇಕ ನಡೆಯಲಿದೆ.
ಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.


ರಾತ್ರಿ ಗಂಟೆ 7.30 ಕ್ಕೆ ಶಿವೇಲಿ,ದರ್ಶನ ಬಲಿ ನಡೆಯಲಿದೆ.
ರಾತ್ರಿ ಗಂಟೆ 10.00 ರಿಂದ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಫೆ.14 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾ:ಪೂಜೆ ನಡೆಯಲಿದೆ.ಗಂಟೆ 8.00 ಕ್ಕೆ ಶಿವೇಲಿ,ನವಕ ಕಲಶಾಭಿಷೇಕ ನಡೆಯಲಿದೆ.
ಮಧ್ಯಾಹ್ನ 12 .00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.
ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ 7.30 ಕ್ಕೆ ನೃತ್ಯ ಬಲಿ ನಡೆಯಲಿದೆ.


ಪುನ: ನಾಗಪ್ರತಿಷ್ಠಾ ಕಾರ್ಯಕ್ರಮ
ಫೆ.14 ರಂದು ಸಂಜೆ ಗಂಟೆ 6.30 ಕ್ಕೆ ಪ್ರಾರ್ಥನೆ,ಪುಣ್ಯಾಹ,ವಾಸ್ತು ಬಲಿ,ವಾಸ್ತು ಪೂಜೆ ನಡೆಯಲಿದೆ.
ಫೆ.15 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,10.30 ರಿಂದ ಪ್ರತಿಷ್ಠಾ ಕಾರ್ಯಕ್ರಮ,ಆಶ್ಲೇಷ ಬಲಿ,ಮಹಾಪೂಜೆ ನಡೆಯಲಿದೆ.

ಫೆ .15 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾ:ಪೂಜೆ ನಡೆಯಲಿದೆ.


ಬೆಳಿಗ್ಗೆ ಗಂಟೆ 8.00 ಕ್ಕೆ ಶಿವೇಲಿ,ನವಕ ಕಲಶಾಭಿಷೇಕ ನಡೆಯಲಿದೆ.
ಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ಶ್ರೀ ಭೂತಬಲಿ,ಸೇವೆ ಸುತ್ತು ,ಪೇಟೆ ಸವಾರಿ ,ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ರಾತ್ರಿ ಗಂಟೆ 9.00ಕ್ಕೆ ರಾತ್ರಿ ಪೂಜೆ,10.00ಕ್ಕೆ ಶಯನ,ಕವಾಟಬಂಧನ ನಡೆಯಲಿದೆ.
ಫೆ.16 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಕವಾಟೋದ್ಟಾಟನೆ,ತೈಲಾಭ್ಯಂಜನ ಗಂಟೆ 8.00 ಕ್ಕೆ ಉಷಾ:ಪೂಜೆ,8.30 ಕ್ಕೆ ಆರಾಟು ಬಲಿ,ಬೆಳಿಗ್ಗೆ ಗಂಟೆ 9.30 ಕ್ಕೆ ಅವಭೃಥ ಸ್ನಾನ ,ದರ್ಶನ ಬಲಿ ನಡೆಯಲಿದೆ.


ಮಧ್ಯಾಹ್ನ ಗಂಟೆ 11.30 ಕ್ಕೆ ರಾಜಾಂಗಣ ಪ್ರಸಾದ ಬಟ್ಟಲುಕಾಣಿಕೆ ಧ್ವಜ ಅವರೋಹಣ,ಸಂಪ್ರೋಕ್ಷಣೆ ,ಮಹಾಪೂಜೆ,ಮಂತ್ರಾಕ್ಷತೆ ,ಅನ್ನಪ್ರಸಾದ ನಡೆಯಲಿದೆ.
ರಾತ್ರಿ ಗಂಟೆ 7.30 ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು,ಭೂತಕೋಲ,ಬಟ್ಟಲುಕಾಣಿಕೆ ನಡೆಯಲಿದೆ.