Home ಚಿತ್ರವರದಿ ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ದೇವರಗದ್ದೆಯಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ದೇವರಗದ್ದೆಯಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆಯ ಕೊರಗ ತನಿಯ ದೈವಸ್ಥಾನದ ಬಳಿಯ ಸ್ಥಳಾಂತರಿಸಲ್ಪಟ್ಟ ಪರ್ಯಾಯ ರಸ್ತೆ ದೇವರಗದ್ದೆ -ಮಾನಾಡು ನೂತನ ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಸುಮಾರು 10ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ ನೆರವೇರಲಿದೆ. ಪುರೋಹಿತ ಶಂಕರ ಭಟ್ ರವರು ಧಾರ್ಮಿಕ ಪೂಜೆ, ಪ್ರಾರ್ಥನೆ ನೆರವೇರಿಸಿದರು.

ಈ ಕಾಮಗಾರಿಗೆ ಅನುದಾನ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಸದಸ್ಯ ಹರೀಶ್ ಇಂಜಾಡಿ,ಸವಿತಾ ಭಟ್,ಸೌಮ್ಯ ಭರತ್ ಮತ್ತಿತರರು, ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್,ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಪವನ್, ರವೀಂದ್ರ ರುದ್ರಪಾದ,ಕಿಶೋರ್ ಅರಂಪಾಡಿ ಗಣೇಶ,ಮೊದಲಾದವರು ಸೇರಿದಂತೆ ಸ್ಥಳೀಯ ಕೊರಗ ತನಿಯ ದೈವಸ್ಥಾನದ ಪ್ರಮುಖರಾದ ದಿನೇಶ್, ಲೋಕೇಶ್,ಲಕ್ಷ್ಮೀಶ, ಅಣ್ಣು, ಸುಬ್ರಹ್ಮಣ್ಯ ಮಾನಾಡು, ತಾರಾನಾಥ,ಪ್ರಶಾಂತಿ, ಯಶ್ವಥ್, ರವಿ ಅಗರಿಕಜೆ,, ಸುಬ್ರಹ್ಮಣ್ಯ ಶಬರಾಯ, ಗುತ್ತಿಗೆದಾರರಾದ ಅಮೃತ ಕನ್ಸ್ಟ್ರಕ್ಷನ್ ಅವಿನಾಶ್ ಪಳ್ಳಿಗದ್ದೆ ಮೊದಲಾದವರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking