![](https://sullia.suddinews.com/wp-content/uploads/2023/01/c8cca93d-1345-4cc3-9dfd-559f3d71381a-1024x767.jpg)
ಸುಳ್ಯ ರಾಷ್ಟ್ರಾಭಿಮಾನಿ ಬಳಗದ ವತಿಯಿಂದ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷವಾಗಿ ಮೃತ್ಯುಂಜಯ ಹೋಮವು ನೆರವೇರಿತು.
ಪ್ರಾತ:ಕಾಲ ಚೆನ್ನಕೇಶವ ದೇವಸ್ಥಾನದ ಬಳಿ ಪ್ರಾರ್ಥಿಸಿ ಪಾದಯಾತ್ರೆಯಲ್ಲಿ ಸಾಗಿ ಬಂದು ಪ್ರಧಾನಿ ನರೇಂದ್ರಮೋದಿಯವರ ಶ್ರೇಯಸ್ಸಿಗಾಗಿ ಮೃತ್ಯುಂಜಯ ಹೋಮ ನಡೆಸಲಾಯಿತು.
ದೇಶದ ಸುಕ್ಷೇಮ,ಪ್ರಧಾನಿಗಳಿಗೆ ಬರತಕ್ಕಂತಹ ಕಂಟಕಗಳ ನಿವಾರಣೆ,ಆರೋಗ್ಯ ಆಯುಷ್ಯಾವೃದ್ಧಿ ,ಪುನಃ ಪ್ರಧಾನಮಂತ್ರಿಪದ ಪ್ರಾಪ್ತಿ, ಸನಾತನ ಧರ್ಮದ ರಕ್ಷಣೆಗಾಗಿ ಮೃತ್ಯುಂಜಯ ಹೋಮವನ್ನು ನಡೆಸಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದರು.