![](https://sullia.suddinews.com/wp-content/uploads/2023/02/1aca8268-5dc4-4e66-b114-6461a1f1c8c3-1024x316.jpg)
ಉಜಿರೆಯಲ್ಲಿ ಫೆ 3ರಿಂದ 5ರವರೆಗೆ ನಡೆದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವೈದ್ಯಕೀಯ ಸೇವೆಗಾಗಿ ಡಾ.ಕೆ.ವಿ.ಚಿದಾನಂದ ಮತ್ತು ಸಾಂಸ್ಕೃತಿಕ ಚಟುವಟಿಕೆಗಾಗಿ ಸುಳ್ಯದ ರಂಗಮನೆಯ ರೂವಾರಿ ಜೀವನರಾಮ್ ಸುಳ್ಯ ಹಾಗೂ ಗೀತಾ ಮೋಂಟಡ್ಕ ಸುಳ್ಯ ರವರನ್ನು ಸನ್ಮಾನಿಸಲಾಯಿತು.
ಸಮಾರೋಪದಲ್ಲಿ ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ..ಎಸ್. ಸಾಧಕರನ್ನು ಸನ್ಮಾನಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಸಮ್ಮೇಳನಾಧ್ಯಕ್ಷೆ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
![](https://sullia.suddinews.com/wp-content/uploads/2023/02/e098a94d-ddf5-4725-be9f-0d5f83230692.jpg)
![](https://sullia.suddinews.com/wp-content/uploads/2023/02/2e66e678-31d3-4494-a5a4-579104059a7f-461x1024.jpg)
![](https://sullia.suddinews.com/wp-content/uploads/2023/02/62f2160c-eee3-4d2f-aee3-bfcd2fcb85f6.jpg)
![](https://sullia.suddinews.com/wp-content/uploads/2023/02/d275c5ae-a6c2-4f17-91d8-a24f8de5b6d6.jpg)