ಜೂನ್ 16-17: ಗುತ್ತಿಗಾರಿನಲ್ಲಿ ಮಾರುತಿ ಕಾರುಗಳ ಗ್ರಾಮೀಣ ಮಹೋತ್ಸವ

0

68 ಸಾವಿರ ವರೆಗಿನ ಕೊಡುಗೆ…

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ,ನಿತ್ಯ ನೂತನ ತಂತ್ರಜ್ಞಾನ ಅಳವಡಿಕೆ ಜೊತೆಗೆ ಕಡಿಮೆ ಬೆಲೆಯೊಡನೆ ಆಕರ್ಷಕ ರೀತಿಯ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿ ಸಾಲಿನಲ್ಲಿರುವಂತಹ ಮಾರುತಿ ಸುಝೂಕಿಯು , ತನ್ನ ಗ್ರಾಹಕ ವರ್ಗಕ್ಕೆ ಕಾರುಗಳ ಖರೀದಿ ಮೇಲೆ ಭರ್ಜರಿ ಕೊಡುಗೆ ಪ್ರಕಟಿಸಿದೆ. ಮಾರುಕಟ್ಟೆ ಪ್ರಾಬಲ್ಯವನ್ನೂ ಅತೀ ಬಲಿಷ್ಠ ರೀತಿಯಲ್ಲಿ ವಿಸ್ತರಿಸಿ , ಎಲ್ಲಾ ವರ್ಗದ ಜನರನ್ನು ಆಕರ್ಷಿಸಿರುವಂತಹ ಮಾರುತಿಯು ಇದೀಗ ,
ಜಿಲ್ಲೆಯ ತನ್ನ ಪ್ರಮುಖ ಡೀಲರ್ , ಹಾರಾಡಿ ಬಳಿಯಿರುವ ಭಾರತ್ ಅಟೋಕಾರ್ಸ್ ಜತೆಯಾಗಿ , ಎರಡು ದಿನದ ಬೃಹತ್ ಗ್ರಾಮೀಣ ಮಹೋತ್ಸವ ನ್ನು ಜೂನ್.16 ರಂದು ಸುಳ್ಯ ತಾಲೂಕಿನ ಗುತ್ತಿಗಾರು ಭಾರತ್ ಪೆಟ್ರೋಲ್ ಬಂಕ್ ಬಳಿ ಪ್ರಾರಂಭಿಸಿದ್ದು , 17 ರಂದು ಕೊನೆಯಾಗಲಿದೆ.

ಯಾವುದೇ ಮಾದರಿಯ ಹಳೇ ಕಾರುಗಳನ್ನು ಬದಲಾಯಿಸೋ ಅವಕಾಶ , ನೂರರಷ್ಟು ಸಾಲದ ವ್ಯವಸ್ಥೆಯೂ ಇರಲಿದ್ದು ,ಅತ್ಯುತ್ತಮ ಕೊಡುಗೆಗಳು ಸಹ ಸಿಗಲಿವೆ.

ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68 ಸಾವಿರ ವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು , ದ್ವಿ ಚಕ್ರ ವಾಹನ ಹೊಂದಿರುವಂಥ ಗ್ರಾಹಕರು ,ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆಫರ್ ಕೂಡ ಪಡೆಯಬಹುದೆಂದು ಭಾರತ್ ಪ್ರಕಟಣೆ ತಿಳಿಸಿದೆ.

ಬೈಕ್ ,ಸ್ಕೂಟರ್ R.C. ನೀಡಿ , ಖರೀದಿ ಲಾಭ ಪಡೆಯಿರಿ…!

ಭಾರತ್ ವತಿಯಿಂದ ಬೈಕ್ ,ಸ್ಕೂಟರ್ ಸವಾರರಿಗೆ ಒಂದೊಳ್ಳೇಯ ಅವಕಾಶ ತೆರೆದುಕೊಂಡಿದ್ದು , ತಮ್ಮ ಬಳಿಯಿರುವ ದ್ವಿ ಚಕ್ರ ವಾಹನದ R.C. ತೋರಿಸಿ , ಕಾರು ಮಾಲೀಕರಾಗೋ ಅವಕಾಶವನ್ನು ಭಾರತ್ ನೀಡಿದ್ದು , ಹೆಚ್ಚುವರಿ ಲಾಭವನ್ನು ಕೂಡ ನೀಡಲು ಸಂಸ್ಥೆ ಮುಂದಾಗಿದೆ.

ವಿವರಗಳಿಗಾಗಿ -9483501730 , 9886640530.