ಎಲಿಮಲೆ ಹಜ್ ಯಾತ್ರೆಗೆ ಬೀಳ್ಕೊಡುಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ಎಲಿಮಲೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಮಹಮ್ಮದ್ ಕುಂಞಿ ಹರ್ಲಡ್ಕ ರವರಿಗೆ ಬೀಳ್ಕೊಡುಗೆ ಹಾಗೂ ಎಸ್‌ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆಗೈದ ಎಲಿಮಲೆ ಜಮಾಅತ್ ವ್ಯಾಪ್ತಿಗೊಳಪಟ್ಟ ವಿಧ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಎಲಿಮಲೆ ಜುಮಾ ಮಸೀದಿಯಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ನುಸ್ರತ್ ನ ಅಧ್ಯಕ್ಷ ಲತೀಫ್ ಹರ್ಲಡ್ಕ, ಜಮಾಅತ್ ಅಧ್ಯಕ್ಷ ಮಹಮದ್ ಇಕ್ಬಾಲ್ ಎಲಿಮಲೆ, ಸ್ಥಳೀಯ ಮುದರಿಸ್ ಅನಸ್ ಮರ್ಝೂಕಿ ಅಲ್ ಅಫ್ಳಲಿ, ಜೀರ್ಮುಕಿ ಮಸೀದಿ ಅಧ್ಯಕ್ಷ ಯೂಸುಫ್ ಪಾಣಾಜೆ, ನುಸ್ರತ್ ಉಪಾಧ್ಯಕ್ಷರಾದ ಸೂಫಿ ಮುಸ್ಲಿಯಾರ್, ಕೋಶಾಧಿಕಾರಿ ಅಬ್ದುಲ್ ಕಾದರ್ ಪಾಣಾಜೆ, ಮೂಸ ಹಾಜಿ ಜೀರ್ಮುಕಿ ಕಾರ್ಯಕ್ರಮ ನೆರವೇರಿಸಿದರು.

ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯರಾದ ಫೈಝಲ್ ಸಖಾಫಿ, ನುಸ್ರತ್ ಪ್ರ. ಕಾರ್ಯದರ್ಶಿ ಸೂಫಿ ಎಲಿಮಲೆ, ಕಾರ್ಯದರ್ಶಿಗಳಾದ ಅಶ್ರಫ್ ದಿನಸಿ ಬಜಾರ್, ಸಿದ್ದೀಕ್ ಎಲಿಮಲೆ, ಜಮಾಅತ್ ಕಮಿಟಿ ಕಾರ್ಯದರ್ಶಿ ಹೈದರ್ ಹಾಜಿ, ಕೋಶಾಧಿಕಾರಿ ಮಹಮೂದ್ ಮುಸ್ಲಿಯಾರ್, ಹಿರಿಯರಾದ ಅಬೂಬಕ್ಕರ್ ಪಾಣಾಜೆ, ಹಾಗೂ ನುಸ್ರತ್ ಇದರ ಉಪಾಧ್ಯಕ್ಷ ಜಿ.ಎಸ್.ಅಬ್ದುಲ್ಲ, ಸದಸ್ಯರಾದ ಸುಲೈಮಾನ್ ಮೆತ್ತಡ್ಕ,ನಾಸಿರ್ ದೊಡ್ಡಂಗಡಿ,ಅಬ್ದುಲ್ ಕಾದರ್ ಅತ್ತಿಮಾರಡ್ಕ, ಇಬ್ರಾಹಿಂ ಜೀರ್ಮುಕಿ, ಹಾಗೂ ಜಮಾಅತರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಜಮಾಅತ್ ಕಮಿಟಿಯ ಸದಸ್ಯರಾಗಿ ಹಜ್ ಯಾತ್ರೆಗೈಯುತ್ತಿರುವ ಮಹಮದ್ ಕುಂಞಿ ಹರ್ಲಡ್ಕರವರನ್ನು ಜಮಾಅತ್ ಕಮಿಟಿಯ ವತಿಯಿಂದ ಅಧ್ಯಕ್ಷ ಮಹಮದ್ ಇಕ್ಬಾಲ್ ಎಲಿಮಲೆಯವರು ಶಾಲು ಹೊದಿಸಿ ಸನ್ಮಾನಿಸಿದರು.