ಯಾದವ ಸಭಾ ತಾಲೂಕು ಸಮಿತಿ ಸಮಾವೇಶದ ಲೆಕ್ಕಪತ್ರ ಮಂಡನೆ

0

ತಾಲೂಕು ಪ್ರಾದೇಶಿಕ ಸಮಿತಿಗಳ ಮಹಾಸಭೆಯ ಕುರಿತು ಚರ್ಚೆ

ಸುಳ್ಯ ತಾಲೂಕು ಯಾದವ ಸಭಾ ವತಿಯಿಂದ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಯಾದವ ಸಮಾವೇಶದ ಲೆಕ್ಕಪತ್ರ ಮಂಡನೆ ಹಾಗೂ ಸುಳ್ಯ ತಾಲೂಕಿನ ಪ್ರಾದೇಶಿಕ ಸಮಿತಿಗಳ ಮಹಾಸಭೆ ನಡೆಸುವ ಕುರಿತು ಸಭೆಯು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅವರ ಅಧ್ಯಕ್ಷತೆಯಲ್ಲಿ ಜೂ.18ರಂದು ನಡೆಯಿತು.


ವೇದಿಕೆಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. .ಮಣಿಯಾಣಿ ಬೆಳ್ಳಾರೆ, ಕೇಂದ್ರ ಸಮಿತಿ ಸಲಹಾ ಸಮಿತಿ ಅಧ್ಯಕ್ಷ ಸುಧಾಮ ಆಲೆಟ್ಟಿ, ಕೇಂದ್ರ ಸಮಿತಿ ಉಪಾಧ್ಯಕ್ಷ ವಿ.ವಿ. ಬಾಲನ್ ಸಂಪಾಜೆ, ತಾಲೂಕು ಸಮಿತಿ ಉಪಾಧ್ಯಕ್ಷರುಗಳಾದ ಕೃಷ್ಣ ಅಕ್ಕಪ್ಪಾಡಿ, ಬಾಲಕೃಷ್ಣ ಅಡ್ಡಬೈಲು, ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಉಪಸ್ಥಿತರಿದ್ದರು.


ತಾಲೂಕು ಯಾದವ ಸಭಾ ಸಮಾವೇಶದ ಅಭಿವೃದ್ಧಿಯ ಬಗ್ಗೆ ಕೇಂದ್ರ ಸಮಿತಿಯ ಸುಧಾಮ ಆಲೆಟ್ಟಿ, ಎ.ಕೆ. ಮಣಿಯಾಣಿ, ವಿ.ವಿ. ಬಾಲನ್ ಅವರು ಮಾತನಾಡಿದರು. ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಲೆಕ್ಕಪತ್ರ ಮಂಡಿಸಿದರು.


ಯಾದವ ಸಭಾ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಹಾಗೂ ಸುಳ್ಯ ತಾಲೂಕಿನ ಒಂಭತ್ತು ಪ್ರಾದೇಶಿಕ ಸಮಿತಿಗಳ ಮಹಾಸಭೆ ನಡೆಸುವ ಕುರಿತು ಚರ್ಚಿಸಲಾಯಿತು. ಕೃಷ್ಣ ಬೆಟ್ಟ ಸ್ವಾಗತಿಸಿ, ವಂದಿಸಿದರು.