ಜು.02 : ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

0

10 ಮಂದಿ ನಾಮಪತ್ರ ಸಲ್ಲಿಕೆ

ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯು ಜು.02 ರಂದು ನಡೆಯಲಿದ್ದು 13 ಮಂದಿ ನಿರ್ದೇಶಕರ ಸ್ಥಾನಕ್ಕೆ 10 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಸಾಮಾನ್ಯ ಕ್ಷೇತ್ರದಿಂದ ಕುಂಞಣ್ಣ ರೈ ಉಮಿಕ್ಕಳ,ಗೋಪಾಲಕೃಷ್ಣ ಪ್ರಭು,ಕರುಣಾಕರ ಆಳ್ವ ಬೇರಿಯ ,ಈಶ್ವರ ಆಳ್ವ ಬೇರ್ಯ, ಅನಿಲ್ ರೈ ಚಾವಡಿಬಾಗಿಲು, ಯತೀಶ ಭಂಡಾರಿ ಸಾರಕರೆ, ವಾಸುದೇವ ಐಗಳಮಕ್ಕಿ ನಾಮಪತ್ರ ಸಲ್ಲಿಸಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಸುಮಾ ಕುರಿಯಾಜೆ ನಾಮಪತ್ರ ಸಲ್ಲಿಸಿದ್ದಾರೆ.


ಮಹಿಳಾ ಮೀಸಲು ಸ್ಥಾನದಿಂದ ವಾರಜಾಕ್ಷಿ, ವಿಂದ್ಯಾ ಎನ್.ರೈ ನಾಮಪತ್ರ ಸಲ್ಲಿಸಿದ್ದಾರೆ.
ಜು.02 ರಂದು ಚುನಾವಣೆ ನಡೆಯಬೇಕಾಗಿದ್ದು 13 ಸ್ಥಾನಕ್ಕೆ 10 ಮಂದಿ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ನಡೆಯಲಿದೆ.


ಪುತ್ತೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಚುನಾವಣಾಧಿಕಾರಿಯಾಗಿದ್ದಾರೆ.