ಸೋಣಂಗೇರಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಪ್ರತಿಜ್ಞೆ ಸ್ವೀಕಾರ

0

ಸೋಣಂಗೇರಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಪ್ರತಿಜ್ಞೆ ಸ್ವೀಕಾರ ಮತ್ತು ಫಲಕ ಅಳವಡಿಕೆ ಜೂ.25 ರಂದು ನಡೆಯಿತು.

ಅಧ್ಯಕ್ಷ ಪ್ರಭಾಕರ ರೈ ಫಲಕ ಅಳವಡಿಸಿ ಮಾತನಾಡಿ, ಸರಕಾರಿ ಇಲಾಖೆಯಲ್ಲಿ ಹೆಚ್ಚಿನ ಲಂಚ ಭ್ರಷ್ಟಾಚಾರ ನಡೆಯುತ್ತಿದ್ದು, ಇದು ಕಡಿಮೆಯಾಗಬೇಕು. ಇದು ಒಂದು ಉತ್ತಮವಾದ ಅಂದೋಲನವಾಗಿದ್ದು ಇದಕ್ಕೆ ನಮ್ಮ ಬೆಂಬಲವಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸತೀಶ್ ಕೆ.ಬಿ., ಕಾರ್ಯದರ್ಶಿ ಹರಿಣಾಕ್ಷಿ ಡಿ., ಸದಸ್ಯರಾದ ಪ್ರಶಾಂತ್ ಮಿತ್ತಮಜಲು, ಕೃಷ್ಣ ನಾಯ್ಕ, ಶಾಂತಿನಗರ, ನಿರಂಜನ ಮಿತ್ತಮಜಲು, ವಿನಯ್ ಎಸ್.ಕೆ., ಅಟೋ ಚಾಲಕ ಸುರೇಶ್ ರೈ ಉಪಸ್ಥಿತರಿದ್ದರು.

ಸುದ್ದಿ ಚಾನೆಲ್‌ನ ಪೂಜಾಶ್ರೀ ವಿತೇಶ್ ಕೋಡಿರವರು ಪ್ರತಿಜ್ಞಾ ವಿಧಿ ಬೋಧಿಸಿದರು.